ಪ್ರಕರಣದ ದೂರುದಾರರಾದ ನಾಗರಾಜ್ ವಿಚಾರಣೆ ಸಂದರ್ಭದಲ್ಲಿ ಗೈರುಹಾಜರಾಗಿದ್ದರು. ಪ್ರಯಾಣಿಕರ ಪರವಾಗಿ ವಾದ ಮಂಡಿಸಿದ ಬಳಕೆದಾರ ವೇದಿಕೆಯ ಕೆ.ಎನ್. ವೆಂಕಟಗಿರಿ, ವರ್ಷದ 355 ದಿನಗಳಲ್ಲಿ ಸಾಗರದಿಂದ ಬೆಂಗಳೂರಿಗೆ ₹ 400 ರ ದರ ನಿಗದಿ ಮಾಡುವ ಬಸ್ ಮಾಲೀಕರು ಹಬ್ಬದ ಸಂದರ್ಭದಲ್ಲಿ ₹ 1,200 ದರ ನಿಗದಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.