ಎಮ್ಮೆಹಟ್ಟಿಯನ್ನು ಗ್ರಾ.ಪಂ. ಆಗಿ ಉಳಿಸಲು ಪ್ರಯತ್ನಿಸಲಾಗಿದೆ. ಅಧಿವೇಶನದಲ್ಲೂ ಈ ಬಗ್ಗೆ ಗಮನ ಸೆಳೆದಿದ್ದೆ. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕಡತಗಳನ್ನು ಸಲ್ಲಿಸಲಾಗಿದ್ದು ಅನುಮೋದನೆ ದೊರೆತಿದೆ. ರಾಜ್ಯಪಾಲರಿಂದ ಅಂಗೀಕೃತವಾಗಬೇಕಿದೆ
ಶಾರದಾ ಪೂರ್ಯಾನಾಯ್ಕ ಶಿವಮೊಗ್ಗ ಗ್ರಾಮಾಂತರ ಶಾಸಕಿ
5 ವರ್ಷಗಳಿಂದ ಪ.ಪಂ.ನಿಂದ ಯಾವುದೇ ಕೆಲಸವಾಗಿಲ್ಲ. ಸರ್ಕಾರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವ ಸಿದ್ಧತೆಯಲ್ಲಿದ್ದು ಅಷ್ಟರಲ್ಲಿ ಎಮ್ಮೆಹಟ್ಟಿ ಗ್ರಾ.ಪಂ.ಯನ್ನು ಪ.ಪಂ.ನಿಂದ ಬೇರ್ಪಡಿಸಬೇಕು. ಈ ಕುರಿತು ಅಧಿಕೃತ ಘೋಷಣೆ ಹೊರಡಿಸಬೇಕು
ಮಲ್ಲೇಶ್ ರಾವ್ (ಕಗ್ಗಿ) ಎಮ್ಮೆಹಟ್ಟಿ ಗ್ರಾಮಸ್ಥ
ಜನಪ್ರತಿನಿಧಿಗಳಿಲ್ಲದೇ ಐದು ವರ್ಷಗಳು ಕಳೆದು ಹೋಗಿವೆ. ಚುನಾಯಿತಿ ಸದಸ್ಯರು ಇಲ್ಲವಾದಲ್ಲಿ ಅಧಿಕಾರಿಗಳ ಪಾರುಪತ್ಯ ಹೆಚ್ಚುತ್ತದೆ. ಅನುದಾನದ ಕೊರತೆ ಕಾಣುತ್ತಿದೆ. ಆದ್ದರಿಂದ ಸರ್ಕಾರ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು