<p><strong>ಶಿವಮೊಗ್ಗ: </strong>ಮುಂದಿನ 25 ವರ್ಷಗಳಲ್ಲಿ ದೇಶದ ಆರ್ಥಿಕತೆಯೇ ಬದಲಾಗಿ ವಿಶ್ವದ ಭೂಪಟದಲ್ಲಿ ಭಾರತಕ್ಕೆ ಎತ್ತರದ ಸ್ಥಾನ ಸಿಗಲಿದೆ ಎಂದು ಬೆಂಗಳೂರಿನ ಎಕ್ಸೆಲ್ ಸಂಸ್ಥೆಯ ಸಂಸ್ಥಾಪಕ ಪಾಲುದಾರ ಪ್ರಶಾಂತ್ ಪ್ರಕಾಶ್ ಹೇಳಿದರು.</p>.<p>ಶಿವಮೊಗ್ಗದ ಪೆಸಿಟ್ ಕಾಲೇಜ್ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಂಜಿನಿಯರಿಂಗ್ ಮತ್ತು ಎಂಬಿಎ 12ನೇ ಪದವೀಧರರ ದಿನಾಚರಣೆಯಲ್ಲಿ ಅವರು ಮಾತನಾಡಿದರು.</p>.<p>ಡಿಜಿಟಲ್ ಮೀಡಿಯಾ ದೇಶದಲ್ಲಿ ಆರ್ಥಿಕತೆಯನ್ನೇ ಬದಲಾಯಿಸುತ್ತಿದ್ದು, ಮುಂದಿನ 25 ವರ್ಷಗಳಲ್ಲಿ ರಾಷ್ಟ್ರವು ಕಳೆದ 75 ವರ್ಷಗಳಲ್ಲಿ ಸಾಧಿಸಲು ಆಗದೇ ಇರುವ ಕೆಲಸಗಳನ್ನು ಸಾಧ್ಯವಾಗಿಸಲಿದೆ ಎಂದು ತಿಳಿಸಿದರು.</p>.<p>ಡಿಜಿಟಲ್ ಮೀಡಿಯಾದಲ್ಲಿ ಸ್ಟಾರ್ಟ್ ಅಪ್ಗಳಿಗೆ ವಿಫುಲ ಅವಕಾಶವಿದೆ. ಲಿಂಕ್ಡ್ ಇನ್, ಫೋರ್ಡ್ ಕಾಸ್ಟ್ ವೆಬಿನಿಯರ್ಗಳು ಉದ್ಯೋಗವನ್ನು ಕಲ್ಪಿಸುತ್ತಿವೆ. ಅವುಗಳನ್ನು ಸದುಪಯೋಗಗೊಳಿಸುವ ಬಗ್ಗೆ ಗೊತ್ತಿದ್ದರೆ ಸಾಕು ಎಂದರು.</p>.<p>ಮುಂದಿನ 10 ವರ್ಷಗಳಲ್ಲಿ ಅಂತರ್ಜಾಲ ಮತ್ತು ತಂತ್ರಾಂಶಗಳು ಉತ್ತಮ ಉದ್ಯೋಗ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ದೇಶದ ಯುವಜನರಿಗೆ ಆಶಾಕಿರಣವಾಗಲಿದೆ ಎಂದು ಹೇಳಿದರು.</p>.<p>ಸಂಸ್ಥೆಯ ಟ್ರಸ್ಟಿ ಮತ್ತು ಜಂಟಿ ಖಜಾಂಚಿ ಬಿ.ವೈ. ವಿಜಯೇಂದ್ರ ಮಾತನಾಡಿ, ‘ಪದವಿ ಪಡೆದ ನಂತರ ಯಾವ ದಾರಿಯಲ್ಲಿ ಹೋಗಬೇಕೆಂಬುದನ್ನು ಮೊದಲೇ ನಿರ್ಧಾರ ಮಾಡಬೇಕು. ಯಾವುದೇ ಕ್ಷೇತ್ರದಲ್ಲಿ ಸಫಲವಾಗಬೇಕಾದರೆ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ಪಿಇಎಸ್ ಟ್ರಸ್ಟ್ನ ಸಿಸಿಎ ಡಾ.ಆರ್. ನಾಗರಾಜ್, ಪ್ರಾಂಶುಪಾಲ ಡಾ.ಎಂ.ವಿ. ಚೈತನ್ಯಕುಮಾರ್, ಪಿಇಎಸ್ ಟ್ರಸ್ಟಿ ಎಸ್.ವೈ. ಉಮಾದೇವಿ, ಅಶ್ವಿನಿ ರಾಘವೇಂದ್ರ, ಸುಭಾಷ್, ಆದಿತ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ಮುಂದಿನ 25 ವರ್ಷಗಳಲ್ಲಿ ದೇಶದ ಆರ್ಥಿಕತೆಯೇ ಬದಲಾಗಿ ವಿಶ್ವದ ಭೂಪಟದಲ್ಲಿ ಭಾರತಕ್ಕೆ ಎತ್ತರದ ಸ್ಥಾನ ಸಿಗಲಿದೆ ಎಂದು ಬೆಂಗಳೂರಿನ ಎಕ್ಸೆಲ್ ಸಂಸ್ಥೆಯ ಸಂಸ್ಥಾಪಕ ಪಾಲುದಾರ ಪ್ರಶಾಂತ್ ಪ್ರಕಾಶ್ ಹೇಳಿದರು.</p>.<p>ಶಿವಮೊಗ್ಗದ ಪೆಸಿಟ್ ಕಾಲೇಜ್ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಂಜಿನಿಯರಿಂಗ್ ಮತ್ತು ಎಂಬಿಎ 12ನೇ ಪದವೀಧರರ ದಿನಾಚರಣೆಯಲ್ಲಿ ಅವರು ಮಾತನಾಡಿದರು.</p>.<p>ಡಿಜಿಟಲ್ ಮೀಡಿಯಾ ದೇಶದಲ್ಲಿ ಆರ್ಥಿಕತೆಯನ್ನೇ ಬದಲಾಯಿಸುತ್ತಿದ್ದು, ಮುಂದಿನ 25 ವರ್ಷಗಳಲ್ಲಿ ರಾಷ್ಟ್ರವು ಕಳೆದ 75 ವರ್ಷಗಳಲ್ಲಿ ಸಾಧಿಸಲು ಆಗದೇ ಇರುವ ಕೆಲಸಗಳನ್ನು ಸಾಧ್ಯವಾಗಿಸಲಿದೆ ಎಂದು ತಿಳಿಸಿದರು.</p>.<p>ಡಿಜಿಟಲ್ ಮೀಡಿಯಾದಲ್ಲಿ ಸ್ಟಾರ್ಟ್ ಅಪ್ಗಳಿಗೆ ವಿಫುಲ ಅವಕಾಶವಿದೆ. ಲಿಂಕ್ಡ್ ಇನ್, ಫೋರ್ಡ್ ಕಾಸ್ಟ್ ವೆಬಿನಿಯರ್ಗಳು ಉದ್ಯೋಗವನ್ನು ಕಲ್ಪಿಸುತ್ತಿವೆ. ಅವುಗಳನ್ನು ಸದುಪಯೋಗಗೊಳಿಸುವ ಬಗ್ಗೆ ಗೊತ್ತಿದ್ದರೆ ಸಾಕು ಎಂದರು.</p>.<p>ಮುಂದಿನ 10 ವರ್ಷಗಳಲ್ಲಿ ಅಂತರ್ಜಾಲ ಮತ್ತು ತಂತ್ರಾಂಶಗಳು ಉತ್ತಮ ಉದ್ಯೋಗ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ದೇಶದ ಯುವಜನರಿಗೆ ಆಶಾಕಿರಣವಾಗಲಿದೆ ಎಂದು ಹೇಳಿದರು.</p>.<p>ಸಂಸ್ಥೆಯ ಟ್ರಸ್ಟಿ ಮತ್ತು ಜಂಟಿ ಖಜಾಂಚಿ ಬಿ.ವೈ. ವಿಜಯೇಂದ್ರ ಮಾತನಾಡಿ, ‘ಪದವಿ ಪಡೆದ ನಂತರ ಯಾವ ದಾರಿಯಲ್ಲಿ ಹೋಗಬೇಕೆಂಬುದನ್ನು ಮೊದಲೇ ನಿರ್ಧಾರ ಮಾಡಬೇಕು. ಯಾವುದೇ ಕ್ಷೇತ್ರದಲ್ಲಿ ಸಫಲವಾಗಬೇಕಾದರೆ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ಪಿಇಎಸ್ ಟ್ರಸ್ಟ್ನ ಸಿಸಿಎ ಡಾ.ಆರ್. ನಾಗರಾಜ್, ಪ್ರಾಂಶುಪಾಲ ಡಾ.ಎಂ.ವಿ. ಚೈತನ್ಯಕುಮಾರ್, ಪಿಇಎಸ್ ಟ್ರಸ್ಟಿ ಎಸ್.ವೈ. ಉಮಾದೇವಿ, ಅಶ್ವಿನಿ ರಾಘವೇಂದ್ರ, ಸುಭಾಷ್, ಆದಿತ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>