ಜಗಜೀವನ ರಾಂ ರಾಜಕಾರಣಿಗಿಂತ ಹೆಚ್ಚಾಗಿ ಸಮಾಜ ಸುಧಾರಕರಾಗಿದ್ದರು. ಕಾರ್ಮಿಕ, ಸಾರಿಗೆ, ಕೃಷಿ, ರೈಲ್ವೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು. ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ತಳ ಸಮುದಾಯಗಳ ಅಭಿವೃದ್ಧಿಗಾಗಿ ಹಲವು ಜನಪರ ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಅವರ ಬಾಲ್ಯದ ಬದುಕು ಕಷ್ಟದಲ್ಲಿ ಸಾಗಿತ್ತು. ದಲಿತ ಕುಟುಂಬದಲ್ಲಿ ಜನಿಸಿದ ಕಾರಣಕ್ಕೆ ಹಲವು ಅವಮಾನಗಳನ್ನು ಅನುಭವಿಸಿದರು. ದೂರದೃಷ್ಟಿ, ಅಸ್ಪೃಶ್ಯತೆಯ ವಿರುದ್ಧ ಹೋರಾಡಿದರು. ರಾಜಕಾರಣಕ್ಕೆ ಸ್ಫೂರ್ತಿಯಾಗಿದ್ದರು. ಅವರ ಕೃಷಿಕ್ರಾಂತಿ ಕಲ್ಪನೆ ಅದ್ವಿತೀಯ ಎಂದರು.