‘ಕುಡಿಯುವ ನೀರಿನ ಅಭಾವವಿದ್ದರೂ ಬೋರ್ವೆಲ್ ಕೊರೆಸುತ್ತಿಲ್ಲ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಕರೆ ಮಾಡಿದರೂ, ಸ್ವೀಕರಿಸುವುದಿಲ್ಲ. ತಕ್ಷಣ ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ದೋಷ ಸರಿಪಡಿಸದಿದ್ದರೆ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.