ಬುಧವಾರ ಬೆಳಿಗ್ಗೆ 11ಕ್ಕೆ ಜೋಗ ಜಲಪಾತಕ್ಕೆ ಬಂದ ಬೆಂಗಳೂರು ಸಿ.ವಿ. ರಾಮನ್ ನಗರದ ಬ್ಯಾಗ್ಮನಿ ಟೆಕ್ಪಾರ್ಕ್ನ ಟೆಕ್ಕಿ ಚೇತನ್ ಕುಮಾರ್ ಸೀತಾಕಟ್ಟೆ ಸೇತುವೆಯ ಕೆಳಭಾಗದಿಂದ ಪ್ರಾಧಿಕಾರದ ಭದ್ರತಾ ಪಡೆಯ ಕಣ್ತಪ್ಪಿಸಿ ರಾಣಿ ಜಲಪಾತದ ನೆತ್ತಿಯ ಬಳಿಗೆ ನುಸುಳಿಕೊಂಡು ಹೋಗಿದ್ದಾರೆ. ಮೊಬೈಲ್, ಲಗೇಜ್ ಬ್ಯಾಗ್ ಎಲ್ಲವನ್ನೂ 960 ಅಡಿ ಆಳದ ಪ್ರಪಾತಕ್ಕೆ ಎಸೆದು, ಇನ್ನೇನು ಒಂದು ಹೆಜ್ಜೆ ಇಟ್ಟರೆ ಪ್ರಪಾತಕ್ಕೆ ಬೀಳುವ ಅಪಾಯಕಾರಿ ಪ್ರದೇಶದ ಬಂಡೆಯ ಮೇಲೆ ಸುಮ್ಮನೆ ಕುಳಿತು ಬಿಟ್ಟಿದ್ದಾರೆ.