ರಾಜಸ್ತಾನದಲ್ಲಿ ನಡೆದಿರುವ ಕೊಲೆಗಡುಕ ಕೃತ್ಯ ಹಿಂದೂ ಸಮಾಜಕ್ಕೆ ಹಾಕಿರುವ ಸವಾಲು. ಇದು ಹಿಂದೂಗಳಿಗೆ ಮಾಡಿರುವ ಅಪಮಾನ ಎಂದು ಹೇಳಿದ ಈಶ್ವರಪ್ಪ, ಅಯೋಧ್ಯೆಯ ರೀತಿ ಕಾಶಿ, ಮಥುರಾದಲ್ಲಿ ಮುಸ್ಲಿಮರ ವಶದಲ್ಲಿರುವ ಹಿಂದೂಗಳ ಶ್ರದ್ಧಾ ಕೇಂದ್ರಗಳನ್ನು ವಾಪಸ್ ಪಡೆಯಬೇಕು. ಕಾಶಿಯಲ್ಲಿ ಸಮೀಕ್ಷೆ ಕಾರ್ಯ ಕೈಗೊಂಡಿದ್ದು, ಅದು ಮುಗಿದ ನಂತರ ಅಲ್ಲಿನ ಶ್ರದ್ಧಾ ಕೇಂದ್ರಗಳು ಹಿಂದೂ ಸಮಾಜದ ಸುಪರ್ದಿಗೆ ಬರಲಿವೆ ಎಂದರು.