‘ಕೃಷಿ ಪದವಿ ಪಡೆಯಬೇಕು ಎನ್ನುವುದು ಅಪ್ಪ, ಅಮ್ಮನ ಕನಸು. ಐಎಎಸ್ ಅಧಿಕಾರಿಯಾಗುವ ಗುರಿ ಇದೆ. ಈಗಿರುವ ಸಬ್ಸಿಡಿ, ಸಾಲ ಸೌಲಭ್ಯಗಳು ರೈತರ ಬದುಕು ಹಸನು ಮಾಡುತ್ತಿಲ್ಲ. ರೈತರಿಗೆ ಹೆಚ್ಚಿನ ನೆರವು ಅಗತ್ಯವಿದೆ. ಐಎಎಸ್ ಅಧಿಕಾರಿ
ಯಾದರೆ ರೈತರ ಬದುಕಿಗೆ ಹೊಸ ಭಾಷ್ಯ ಬರೆಯುವೆ’ ಎಂದು ಮನದಾಳ ಬಿಚ್ಚಿಟ್ಟರು ಅಕ್ಷತಾ.