<p>ಶಿವಮೊಗ್ಗ: ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ಸಾಮಾನ್ಯ ರೈತ ಕುಟುಂಬಗಳ ಇಬ್ಬರು ವಿದ್ಯಾರ್ಥಿನಿಯರು ತಲಾ ನಾಲ್ಕು ಚಿನ್ನದ ಪದಕಗಳ ಸಾಧನೆ ಮಾಡಿದ್ದಾರೆ.</p>.<p>ಸಣ್ಣ ಹಿಡುವಳಿದಾರರ ಕುಟುಂಬದ ಎಚ್.ಎಲ್.ಅಕ್ಷತಾ, ಶಿಕ್ಷಕ ದಂಪತಿ ಪುತ್ರಿ ಎನ್. ಸ್ಫೂರ್ತಿ ಚಿನ್ನದ ಪದಕಗಳನ್ನು ಪಡೆದ ರ್ಯಾಂಕ್ ವಿಜೇತರು.</p>.<p>ವಿಶ್ವವಿದ್ಯಾಲಯದ ನವುಲೆ ಕ್ಯಾಂಪಸ್ನಲ್ಲಿ ಕೃಷಿ ಪದವಿ ಅಧ್ಯಯನ ಮಾಡಿರುವ ಅಕ್ಷತಾ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ಲೋಕೇಶ್, ರೇಣುಕಾ ದಂಪತಿಯ ಪುತ್ರಿ.ಪ್ರಸ್ತುತ ಮಹಾರಾಷ್ಟ್ರದಲ್ಲಿ ಸ್ನಾತಕೋತ್ತರ ಪದವಿ (ಎಂಎಸ್ಸಿ ಅಗ್ರಿ) ಓದುತ್ತಿದ್ದಾರೆ. ನಾಲ್ಕೂವರೆ ಎಕರೆ ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ ದುಡಿದು ಮಗಳನ್ನು ಓದಿಸಿದ್ದಾರೆ.</p>.<p>‘ಕೃಷಿ ಪದವಿ ಪಡೆಯಬೇಕು ಎನ್ನುವುದು ಅಪ್ಪ, ಅಮ್ಮನ ಕನಸು. ಐಎಎಸ್ ಅಧಿಕಾರಿಯಾಗುವ ಗುರಿ ಇದೆ. ಈಗಿರುವ ಸಬ್ಸಿಡಿ, ಸಾಲ ಸೌಲಭ್ಯಗಳು ರೈತರ ಬದುಕು ಹಸನು ಮಾಡುತ್ತಿಲ್ಲ. ರೈತರಿಗೆ ಹೆಚ್ಚಿನ ನೆರವು ಅಗತ್ಯವಿದೆ. ಐಎಎಸ್ ಅಧಿಕಾರಿ<br />ಯಾದರೆ ರೈತರ ಬದುಕಿಗೆ ಹೊಸ ಭಾಷ್ಯ ಬರೆಯುವೆ’ ಎಂದು ಮನದಾಳ ಬಿಚ್ಚಿಟ್ಟರು ಅಕ್ಷತಾ.</p>.<p>ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ತೋಟಗಾರಿಕೆ ಮಹಾವಿದ್ಯಾಲಯದ ಎನ್.ಸ್ಫೂರ್ತಿ ನೆಲಮಂಗಲದ ಶಿಕ್ಷಕ ದಂಪತಿ, ನಂಜುಂಡಪ್ಪ – ಮಂಜುಳಾ ಅವರ ಪುತ್ರಿ. ತೋಟಗಾರಿಕೆ ವಿಷಯದಲ್ಲಿ ಪ್ರಥಮ ರ್ಯಾಂಕ್ ಪಡೆದು ನಾಲ್ಕು ಚಿನ್ನದ ಪದಕ ಗಳಿಸಿದ್ದಾರೆ.</p>.<p>‘ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವೆ. ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಸಾಧನೆಗೆ ಪೋಷಕರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ ಕಾರಣ. ಸಮಯ ಸಿಕ್ಕಾಗ ಓದುತ್ತಿದ್ದೆ. ಸಾಮಾನ್ಯ ವಿದ್ಯಾರ್ಥಿಗಳೂ ರ್ಯಾಂಕ್ ಗಳಿಸಬಹುದು ಎನ್ನುವ ವಿಶ್ವಾಸ ಮೂಡಿಸಿದೆ’ ಎಂದು ಸ್ಫೂರ್ತಿ ಹೇಳಿದರು.</p>.<p>ಕೃಷಿ ಕೀಟಶಾಸ್ತ್ರದಲ್ಲಿ ಪಿಎಚ್ಡಿ ಮಾಡಿದ ಎಸ್.ಅಂಬರೀಶ್, ಕೃಷಿ ಕೀಟಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಜೆ. ದಿವ್ಯಾ, ಅರಣ್ಯಶಾಸ್ತ್ರದಲ್ಲಿ ಪದವಿ ಪಡೆದ ಕ್ಷಮಾ ಕೋಪರ್ಡೆ ತಲಾ ಎರಡು ಚಿನ್ನದ ಪದಕ ಪಡೆದರು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಪದವಿ ಪ್ರದಾನಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವಮೊಗ್ಗ: ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ಸಾಮಾನ್ಯ ರೈತ ಕುಟುಂಬಗಳ ಇಬ್ಬರು ವಿದ್ಯಾರ್ಥಿನಿಯರು ತಲಾ ನಾಲ್ಕು ಚಿನ್ನದ ಪದಕಗಳ ಸಾಧನೆ ಮಾಡಿದ್ದಾರೆ.</p>.<p>ಸಣ್ಣ ಹಿಡುವಳಿದಾರರ ಕುಟುಂಬದ ಎಚ್.ಎಲ್.ಅಕ್ಷತಾ, ಶಿಕ್ಷಕ ದಂಪತಿ ಪುತ್ರಿ ಎನ್. ಸ್ಫೂರ್ತಿ ಚಿನ್ನದ ಪದಕಗಳನ್ನು ಪಡೆದ ರ್ಯಾಂಕ್ ವಿಜೇತರು.</p>.<p>ವಿಶ್ವವಿದ್ಯಾಲಯದ ನವುಲೆ ಕ್ಯಾಂಪಸ್ನಲ್ಲಿ ಕೃಷಿ ಪದವಿ ಅಧ್ಯಯನ ಮಾಡಿರುವ ಅಕ್ಷತಾ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ಲೋಕೇಶ್, ರೇಣುಕಾ ದಂಪತಿಯ ಪುತ್ರಿ.ಪ್ರಸ್ತುತ ಮಹಾರಾಷ್ಟ್ರದಲ್ಲಿ ಸ್ನಾತಕೋತ್ತರ ಪದವಿ (ಎಂಎಸ್ಸಿ ಅಗ್ರಿ) ಓದುತ್ತಿದ್ದಾರೆ. ನಾಲ್ಕೂವರೆ ಎಕರೆ ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ ದುಡಿದು ಮಗಳನ್ನು ಓದಿಸಿದ್ದಾರೆ.</p>.<p>‘ಕೃಷಿ ಪದವಿ ಪಡೆಯಬೇಕು ಎನ್ನುವುದು ಅಪ್ಪ, ಅಮ್ಮನ ಕನಸು. ಐಎಎಸ್ ಅಧಿಕಾರಿಯಾಗುವ ಗುರಿ ಇದೆ. ಈಗಿರುವ ಸಬ್ಸಿಡಿ, ಸಾಲ ಸೌಲಭ್ಯಗಳು ರೈತರ ಬದುಕು ಹಸನು ಮಾಡುತ್ತಿಲ್ಲ. ರೈತರಿಗೆ ಹೆಚ್ಚಿನ ನೆರವು ಅಗತ್ಯವಿದೆ. ಐಎಎಸ್ ಅಧಿಕಾರಿ<br />ಯಾದರೆ ರೈತರ ಬದುಕಿಗೆ ಹೊಸ ಭಾಷ್ಯ ಬರೆಯುವೆ’ ಎಂದು ಮನದಾಳ ಬಿಚ್ಚಿಟ್ಟರು ಅಕ್ಷತಾ.</p>.<p>ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ತೋಟಗಾರಿಕೆ ಮಹಾವಿದ್ಯಾಲಯದ ಎನ್.ಸ್ಫೂರ್ತಿ ನೆಲಮಂಗಲದ ಶಿಕ್ಷಕ ದಂಪತಿ, ನಂಜುಂಡಪ್ಪ – ಮಂಜುಳಾ ಅವರ ಪುತ್ರಿ. ತೋಟಗಾರಿಕೆ ವಿಷಯದಲ್ಲಿ ಪ್ರಥಮ ರ್ಯಾಂಕ್ ಪಡೆದು ನಾಲ್ಕು ಚಿನ್ನದ ಪದಕ ಗಳಿಸಿದ್ದಾರೆ.</p>.<p>‘ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವೆ. ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಸಾಧನೆಗೆ ಪೋಷಕರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ ಕಾರಣ. ಸಮಯ ಸಿಕ್ಕಾಗ ಓದುತ್ತಿದ್ದೆ. ಸಾಮಾನ್ಯ ವಿದ್ಯಾರ್ಥಿಗಳೂ ರ್ಯಾಂಕ್ ಗಳಿಸಬಹುದು ಎನ್ನುವ ವಿಶ್ವಾಸ ಮೂಡಿಸಿದೆ’ ಎಂದು ಸ್ಫೂರ್ತಿ ಹೇಳಿದರು.</p>.<p>ಕೃಷಿ ಕೀಟಶಾಸ್ತ್ರದಲ್ಲಿ ಪಿಎಚ್ಡಿ ಮಾಡಿದ ಎಸ್.ಅಂಬರೀಶ್, ಕೃಷಿ ಕೀಟಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಜೆ. ದಿವ್ಯಾ, ಅರಣ್ಯಶಾಸ್ತ್ರದಲ್ಲಿ ಪದವಿ ಪಡೆದ ಕ್ಷಮಾ ಕೋಪರ್ಡೆ ತಲಾ ಎರಡು ಚಿನ್ನದ ಪದಕ ಪಡೆದರು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಪದವಿ ಪ್ರದಾನಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>