ಉಳಿದ ಎರಡು ಎಕರೆ ಜಮೀನಿನಲ್ಲಿ ಸೊಪ್ಪು, ಮೂಲಂಗಿ, ಬೀನ್ಸ್ ಮುಂತಾದ ತರಕಾರಿಗಳು, ಪೇರಲ, ಸಪೋಟ ಹಣ್ಣಿನ ಮರಗಳು ಶುಂಠಿ, ನುಗ್ಗೆ, ಏಲಕ್ಕಿ ಮತ್ತು ಹೂವಿನ ಗಿಡಗಳನ್ನು ಬೆಳೆಸಿದ್ದಾರೆ. ಇವರ ಜಮೀನಿನಲ್ಲಿಯೇ ಕೆರೆಯನ್ನು ನಿರ್ಮಿಸಿಕೊಂಡಿದ್ದು, ತರಹೇವಾರಿ ಮೀನುಗಳನ್ನು ಸಾಕಿ ಸುತ್ತಮುತ್ತಲಿನ ಹಳ್ಳಿಯ ಜನರ ಗಮನ ಸೆಳೆದಿದ್ದಾರೆ. ಇವರ ಹೆಸರು ಕೃಷ್ಣಪ್ಪ ಆದರೂ ಸುತ್ತ ಹಳ್ಳಿಗಳ ಜನರಿಗೆ ಇವರು ಅಪ್ಪಯ್ಯ ಎಂದೇ ಪರಿಚಿತ.