ರಾಜ್ಯ ಸರ್ಕಾರ ಗೋಹತ್ಯೆ ನಿಷೇಧಿಸಿ ಸುರ್ಗೀವಾಜ್ಞೆ ಹೊರಡಿಸಿದ ಕಾರಣ ಬಿಜೆಪಿ ವಿಶೇಷ ಸಭೆಗೂ ಮೊದಲು ಗೋ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ನಳಿನ್ಕುಮಾರ್ ಕಟೀಲ್, ಡಿ.ಎಚ್.ಶಂಕರ ಮೂರ್ತಿ ಮತ್ತಿತರರು ಇದ್ದರು. ಈಶ್ವರಪ್ಪ ಅವರು ಗೋಗ್ರಾಸ ನೀಡುವಾಗ ಹಸು ದಿಢೀರ್ ತಿವಿದಿದೆ. ತಕ್ಷಣ ಸಚಿವರು ಹಿಂದೆ ಸರಿದ ಕಾರಣ ಕೂದಲೆಳೆ ಅಂತರದಲ್ಲಿ ಸಚಿವರು ಅಪಾಯದಿಂದ ಪಾರಾಗಿದ್ದಾರೆ.