ಕಾಂಗ್ರೆಸ್ ಜಾತಿ ರಾಜಕಾರಣ, ಮುಸ್ಲಿಮರ ಓಲೈಕೆ, ಜಾತಿಗಳ ಮಧ್ಯೆ ಒಡಕು ಮತ್ತಿತರ ಕಾರಣಗಳಿಂದ ಕಾಂಗ್ರೆಸ್ ಸಿಂದಗಿಯಲ್ಲಿ ಹೀನಾಯ ಸೋಲು ಅನುಭವಿಸಿದೆ. ಕಾಂಗ್ರೆಸ್ ಸುನಾಮಿಗೆ ಮುಂಬರುವ ದಿನಗಳಲ್ಲಿ ಬಿಜೆಪಿ ಕೊಚ್ಚಿ ಹೋಗಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಹಾನಗಲ್ ಗೆಲುವನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಲು ಹೊರಟಿದ್ದಾರೆ. ಮುಖ್ಯಮಂತ್ರಿ ತವರು ಕ್ಷೇತ್ರದ ಸೋಲು ಸರ್ಕಾರಕ್ಕೆ ಹಿನ್ನಡೆಯಲ್ಲ. ಹಿಂದೆ ಸಿದ್ದರಾಮಯ್ಯ, ಜೆಎಚ್.ಪಟೇಲರು ತಮ್ಮದೇ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಒಂದು ಕ್ಷೇತ್ರದ ಸೋಲು ಪಕ್ಷದ ಸೋಲು ಎಂದಿಗೂ ನಿರ್ಣಾಯಕವಲ್ಲ ಎಂದು ಪ್ರತಿಪಾದಿಸಿದರು.