ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೊರಬ: ಶೇ 53ರಷ್ಟು ಮಳೆ ಕೊರತೆ, ಕೃಷಿಗೆ ಹಿನ್ನಡೆ

Published : 29 ಜೂನ್ 2024, 6:32 IST
Last Updated : 29 ಜೂನ್ 2024, 6:32 IST
ಫಾಲೋ ಮಾಡಿ
Comments
ಕೃಷಿ ಜಮೀನಿನಲ್ಲಿ ಎಮ್ಮೆಗಳನ್ನು ಮೇಯಿತ್ತಿರುವುದು
ಕೃಷಿ ಜಮೀನಿನಲ್ಲಿ ಎಮ್ಮೆಗಳನ್ನು ಮೇಯಿತ್ತಿರುವುದು
ಗುಡ್ಡೆಕೆರೆ ಬಸಪ್ಪ ಅಂಕರವಳ್ಳಿ
ಗುಡ್ಡೆಕೆರೆ ಬಸಪ್ಪ ಅಂಕರವಳ್ಳಿ
ಇತ್ತೀಚಿನ ವರ್ಷಗಳಲ್ಲಿ ಮಳೆ ಸಕಾಲಕ್ಕೆ ಆಗುತ್ತಿಲ್ಲ. ರೈತರು ಹದ ತಪ್ಪಿ ಬೆಳೆ ಮಾಡಿದರೂ ಯೋಗ್ಯ ಇಳುವರಿ ಕಾಣಲು ಸಾಧ್ಯವಿಲ್ಲ.‌ ಸರ್ಕಾರ ಮುಂಗಾರು ಪೂರ್ವದಲ್ಲಿ ರೈತರ ನೆರವಿಗೆ‌ ಮುಂದಾಗಬೇಕು.
ಗುಡ್ಡೆಕೆರೆ ಬಸಪ್ಪ ರೈತ ಅಂಕರವಳ್ಳಿ
ಕೆ.ಜಿ.ಕುಮಾರ್
ಕೆ.ಜಿ.ಕುಮಾರ್
ಜುಲೈ ಮೊದಲ ವಾರದವರೆಗೆ ‌ಮಳೆ ವಾತಾವರಣ ಕಡಿಮೆ ಇದ್ದು ರೈತರು ಹವಾಮಾನಕ್ಕೆ ಅನುಗುಣವಾಗಿ ಬೆಳೆ ಬೆಳೆಯಲು ಮುಂದಾಗಬೇಕು.
ಕೆ.ಜಿ.ಕುಮಾರ್ ಸಹಾಯಕ ಕೃಷಿ ಅಧಿಕಾರಿ
ಅಲ್ಪಾವಧಿ ತಳಿ ಸೂಕ್ತ
ತಾಲ್ಲೂಕಿನಲ್ಲಿ ಒಟ್ಟು 19500 ಹೆಕ್ಟೇರ್ ಭತ್ತ ಬೆಳೆಯ ಗುರಿ ಹೊಂದಲಾಗಿದ್ದು ಈಗಾಗಲೇ 3930 ಹೆಕ್ಟೇರ್ ಕೂರಿಗೆ ಬಿತ್ತನೆ ಮಾಡಲಾಗಿದೆ. ನಾಟಿಗೆ ಸಸಿಮಡಿ ಸಿದ್ಧತೆಗೆ ಮಳೆ ಕೊರತೆ ಇದೆ. 9000 ಹೆಕ್ಟೇರ್ ಪ್ರದೇಶದ ಪೈಕಿ 6840 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳದ ಬಿತ್ತನೆ ಪೂರ್ಣಗೊಂಡಿದೆ. ರೈತರು ಮಳೆ ಕೊರತೆ ಉಂಟಾದಲ್ಲಿ ದೀರ್ಘಾವಧಿ ಭತ್ತದ ತಳಿಗಳಿಗೆ ಬದಲಾಗಿ ಅಲ್ಪಾವಧಿ ಭತ್ತದ ತಳಿಗಳನ್ನು ಉಪಯೋಗಿಸುವುದು ಸೂಕ್ತ. ತೀವ್ರ ಮಳೆ ಕೊರತೆ ಉಂಟಾದಲ್ಲಿ ದ್ವಿದಳ ಧಾನ್ಯ ಬೆಳೆಯುವುದು ಸೂಕ್ತ ಎಂದು ಸಹಾಯಕ ಕೃಷಿ ಅಧಿಕಾರಿ ಕೆ.ಜಿ. ಕುಮಾರ್ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT