‘ಮೊದಲ ಕಂತಿನ ಹಣ ಬಿಡುಗಡೆಯಾದ ತಕ್ಷಣ ಗುರುಗಳ ಮಾರ್ಗದರ್ಶನದಲ್ಲಿ ಸಮಾಜದ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗೆ ಅನುದಾನ ವಿನಿಯೋಗಿಸಲಾಗುವುದು. ಪ್ರಾರಂಭದಲ್ಲೇ ಗುರುಗಳು ನನ್ನನ್ನು ಕರೆಯಿಸಿ ನೀನು ನಿಗಮದ ಮೊದಲ ಅಧ್ಯಕ್ಷನಾಗಿದ್ದೀಯಾ, ಎಷ್ಟು ಗಟ್ಟಿಯಾಗಿ ಅಡಿಪಾಯ ಹಾಕುತ್ತೀಯಾ ಸಮಾಜ ಅಷ್ಟು ಗಟ್ಟಿಯಾಗುತ್ತಾ ಹೋಗುತ್ತದೆ ಎಂದು ತಿಳಿಸಿದ್ದಾರೆ. ಸಮಾಜದ ಬಡ ವಿದ್ಯಾರ್ಥಿಗಳಿಗೆ ಐಎಎಸ್, ಐಪಿಎಸ್, ಉನ್ನತ ಶಿಕ್ಷಣಕ್ಕೆ ನೆರವು, ಅಪೂರ್ಣಗೊಂಡ ಸಮುದಾಯ ಭವನಗಳ ಕಾಮಗಾರಿ ಪೂರ್ಣಗೊಳಿಸುವುದು ನನ್ನ ಗುರಿ’ ಎಂದು ಹೇಳಿದರು