ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರಪ್ಪ ನಾಲಿಗೆಗೆ ಬಣ್ಣ ಹಚ್ಚಿಕೊಳ್ಳುತ್ತಾರೆ: ಮಧು ಬಂಗಾರಪ್ಪ

Published 20 ಏಪ್ರಿಲ್ 2024, 16:06 IST
Last Updated 20 ಏಪ್ರಿಲ್ 2024, 16:06 IST
ಅಕ್ಷರ ಗಾತ್ರ

ಭದ್ರಾವತಿ: ‘ಸಿನಿಮಾದವರು ಮುಖಕ್ಕೆ ಬಣ್ಣಹಚ್ಚಿಕೊಂಡರೆ, ಈಶ್ವರಪ್ಪ ನಾಲಿಗೆಗೆ ಬಣ್ಣಹಚ್ಚಿಕೊಂಡು ಮಾತನಾಡುತ್ತಾರೆ. ಈಶ್ವರಪ್ಪ ನಾಲಾಯಕ್. ಅವರ ಹೇಳಿಕೆಗಳಿಗೆ ಉತ್ತರಿಸುವುದೇ ವ್ಯರ್ಥ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿನ ಶನಿವಾರ ಚುನಾವಣೆ ಸಭೆ ನಡೆಸಿ ಮಾತನಾಡಿ, ಜನರಿಗೆ ಬಿಜೆಪಿ ನಾಟಕದ ಅರಿವಾಗಿದೆ. ಜನರು ಈ ಬಾರಿ ಬದಲಾವಣೆ ಬಯಸಿರುವುದೇ ಕಾಂಗ್ರೆಸ್‌ಗೆ ಶಕ್ತಿ. ಬಿಜೆಪಿಯಿಂದ  ಮೋಸ ಹೋಗಿದ್ದೇವೆ ಎಂದು ಮತದಾರರಿಗೆ ತಿಳಿದಿದೆ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಗೆಲುವು ಸುಲಭವಾಗಲಿದೆ ಎಂದರು.

ಶಾಸಕ ಬಿ.ಕೆ.ಸಂಗಮೇಶ್ವರ್ ಮಾತನಾಡಿ, ಕೇಂ‌ದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ. ಭದ್ರಾವತಿಯ ಜನತೆ ಗೀತಾ ಶಿವರಾಜಕುಮಾರ್ ಗೆಲುವಿಗಾಗಿ ಹೆಚ್ಚಿನ ಮತ ನೀಡಬೇಕು ಎಂದು ಮನವಿ ಮಾಡಿದರು.

ಶಿರಸಿ ಶಾಸಕ ಭೀಮಣ್ಣ, ಕಾಂಗ್ರೆಸ್ ಮುಖಂಡರಾದ ಪ್ರಸನ್ನಕುಮಾರ್, ಕಲಗೋಡು ರತ್ನಾಕರ, ಬಿ.ಕೆ.ಮೋಹನ್, ಬಲ್ಕೀಶ್ ಬಾನು, ರೇಣುಕಮ್ಮ, ಎಸ್.ಕುಮಾರ್, ಎಚ್.ಎಸ್. ಷಡಾಕ್ಷರಿ, ಚೆನ್ನಪ್ಪ, ಮಣಿ, ಕಾಂತರಾಜ್, ಮಣಿಶೇಖರ್, ಬಷೀರ್, ಸಿ.ಜಯಪ್ಪ, ಸುದೀಪ್ ಕುಮಾರ್, ಶಿವಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT