ಶಿವಮೊಗ್ಗ: ಅಂಗವಿಕಲರು, ವಿಧವೆಯರು ಹಾಗೂ ವೃದ್ದೆಯರಿಗೆ ಹಲವುತಿಂಗಳಿನಿಂದ ಮಾಸಿಕ ಪಿಂಚಣಿಬಂದಿಲ್ಲ. ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತೇಜಸ್ವಿನಿ ಮಹಿಳಾ ಸಂಘದ ಸದಸ್ಯರು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆಮನವಿ ಸಲ್ಲಿಸಿದರು.
ನಿತ್ಯವೂ ತಾಲ್ಲೂಕು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಿಂಚಣಿ ಹಣಕ್ಕಾಗಿ ತಾಲ್ಲೂಕು ಕಚೇರಿಗೆ ನಿತ್ಯ 50 ರಿಂದ 100 ಪಿಂಚಣಿದಾರರು ಸಾಲಾಗಿ ನಿಲ್ಲುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಯಾವುದೇ ಅಂತರ ಕಾಯ್ದುಕೊಳ್ಳ ನಿಲ್ಲುತ್ತಿದ್ದಾರೆ. ಎಲ್ಲ ದಾಖಲೆಗಳನ್ನು ಈ ಮೊದಲು ನೀಡಿದ್ದರೂ, ಅಧಿಕಾರಿಗಳು ಮತ್ತೆ ಮತ್ತೆ ದಾಖಲೆಗಳಿಗಾಗಿ ಓಡಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೆಲವರಿಗೆ ಪಿಂಚಣಿ ಮಂಜೂರಾತಿ ಆದೇಶ ಬಂದು 15 ತಿಂಗಳಾಗಿದ್ದರೂ ತಾಲ್ಲೂಕು ಆಡಳಿತ ಪಿಂಚಣಿ ಬಿಡುಗಡೆ ಮಾಡಿಲ್ಲ. ಪಿಂಚಣಿ ನಂಬಿಕೊಂಡವರಿಗೆಜೀವನ ನಿರ್ವಹಣೆ ಕಷ್ಟವಾಗಿದೆಎಂದು ಅಳಲು ತೋಡಿಕೊಂಡರು.
ಸಂಘದ ಅಧ್ಯಕ್ಷೆ ಸೀತಾಲಕ್ಷ್ಮಿ ಸತ್ಯನಾರಾಯಣ, ಮಂಜುಳಾ ಪಾಂಡೆ, ಕಲ್ಪನಾ ರಮೇಶ್, ಭಾಗ್ಯ, ಸುಶೀಲಮ್ಮ, ಶಾಂತಮ್ಮಮನವಿ ಸಲ್ಲಿಸಿದರು.