‘ಹಿಂದೂ ಯುವಕ ಹರ್ಷ ಹತ್ಯೆಯಾಗಿ ಒಂದು ವಾರ ಕಳೆಯುತ್ತಾ ಬಂದರೂ ಕಾಂಗ್ರೆಸ್ ನಾಯಕರಿಗೆ ಆತನ ಕುಟುಂಬಕ್ಕೆ ಸಾಂತ್ವನ ಹೇಳಲು ಸಮಯ ಇಲ್ಲವಾಗಿದೆ. ರಾಜಕೀಯಕ್ಕಾಗಿ ಒಂದು ವರ್ಗವನ್ನು ಓಲೈಸುವ ಕಾಂಗ್ರೆಸ್ ನಡವಳಿಕೆ ಖಂಡನೀಯ. ಎಲ್ಲವನ್ನೂ ಹಿಂದೂ ಸಮಾಜ ಗಮನಿಸುತ್ತಿದೆ. ಕೋಮುವಾದಕ್ಕೆ ಬಲಿಯಾದ ಹಿಂದೂ ಯುವಕರ ರಕ್ಷಣೆಗೆ ಬೆಂಗಾವಲಾಗಿ ನಿಲ್ಲುತ್ತೇವೆ’ ಎಂದು ಭರವಸೆ ನೀಡಿದರು.