ಕಾರ್ಯಕ್ರಮ ಉದ್ಘಾಟಿಸಿದ ಸಿಗಂದೂರಿನ ಧರ್ಮಾಧಿಕಾರಿ ಎಸ್.ರಾಮಪ್ಪ, ‘ಆಧುನಿಕ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ದುರುಪಯೋಗಗಳು ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳನ್ನು ಧರ್ಮ ಧರ್ಮಗಳ ನಡುವೆ ಅಸಹನೆ ಸೃಷ್ಟಿಸುವ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇಂತಹ ಕಮ್ಮಟಗಳು ಪರ್ಯಾಯ ಚಿಂತನೆ ಯನ್ನು ಸಮಾಜದಲ್ಲಿ ಮೂಡಿಸಲಿ’ ಎಂದರು.