ಹೊಸಕೊಪ್ಪದ ರತ್ನಾಕರ್ ಮತ್ತು ಸುಧಾಕರ್ ಅವರದು ಅವಿಭಕ್ತ ಕುಟುಂಬ. ಸಹೋದರಿಬ್ಬರೂ ಸೇರಿ ತಮಗಿರುವ 6 ಎಕರೆ ಜಮೀನಿನಲ್ಲಿ ಭತ್ತ, ಅಡಿಕೆ, ತೆಂಗು, ಬಾಳೆ, ಕಾಳು ಮೆಣಸನ್ನು ಬೆಳೆಯುತ್ತಿದ್ದಾರೆ. ನೀರಿಗಾಗಿ 2 ಕೊಳವೆ ಬಾವಿಗಳನ್ನು ನಿರ್ಮಿಸಿದ್ದಾರೆ. 5 ಎಕರೆ ಜಮೀನಿನಲ್ಲಿ ನೀಲಗಿರಿಯನ್ನು ಸಹ ಬೆಳೆದಿದ್ದಾರೆ. ಆದರೆ ಕೃಷಿಯ ಜೊತೆಗೆ ಹೈನುಗಾರಿಕೆಯಲ್ಲಿ ಹೊಸತನವನ್ನು ಸೃಷ್ಟಿಸಿ ಮಾದರಿ ರೈತರೆಂದು ಜನಪ್ರಿಯರಾಗಿದ್ದಾರೆ.