ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ‘ಬಿಜೆಪಿ ಪಕ್ಷಕ್ಕೆ ಡಿ.ಎಚ್. ಶಂಕರಮೂರ್ತಿ ದೀಪ ಆದರೆ, ಯಡಿಯೂರಪ್ಪ ಅವರು ಕಮಲ ಇದ್ದಂತೆ. ದೀನದಯಾಳ್ ಅವರ ಆಶಯದಂತೆ ಇಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗುತ್ತಿದೆ. ಮುಂದೆ ಕಾಶಿಯಲ್ಲಿ ವಿಶ್ವನಾಥ ದೇವಾಲಯ ಆಗಲಿದೆ. ಜೊತೆಗೆ ಗೋಹತ್ಯೆ ಸಹ ನಿಲ್ಲಲಿದೆ’ ಎಂದರು.