ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಟಗುಪ್ಪ ಸೇತುವೆ ಮಾರ್ಗವಾಗಿ ಸಾಗರ ಬಲು ಹತ್ತಿರವಾದ ಮಾರ್ಗವಾಗಿದೆ. ಸುತ್ತಲೂ ಮುಳುಗಡೆ ಹಿನ್ನೀರು ತುಂಬಿರುವ ಕಾರಣ ಈ ಭಾಗದ ಜನರು ಸುತ್ತುವರಿದು ಹೋಗಬೇಕಾಗಿತ್ತು. ಜನರು ಸೇತುವೆ ಬೇಡಿಕೆ ಇಟ್ಟಿದ್ದರು. 2007ರಲ್ಲಿ ಜೆಡಿಎಸ್ ಸರ್ಕಾರ ಇದ್ದಾಗ ರೇವಣ್ಣ ಅವರ ಅವದಿಯಲ್ಲಿ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಈ ಭಾಗದ ಮುಖಂಡರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಲ್ಲಿ ಬೇಡಿಕೆ ಇಟ್ಟು ಹೋರಾಟ ನಡೆಸಿದ್ದರ ಫಲವಾಗಿ ಇಂದು ಸೇತುವೆಯ ಕನಸು ನನಸಾಗಿದೆ’ ಎಂದರು.