<p><strong>ಹೊಸನಗರ: </strong>‘ಪಟಗುಪ್ಪ ಸೇತುವೆ ನಿರ್ಮಾಣ ಬಿಜೆಪಿಯ ಸಾಧನೆಯಲ್ಲ. ಅದು ಈ ಭಾಗದ ಜನರ ಆಶೋತ್ತರದ ಪ್ರತೀಕವಾಗಿ ನಿರ್ಮಾಣವಾಗಿದೆ. ಸೇತುವೆ ನಿರ್ಮಾಣವನ್ನು ಪಕ್ಷದ ಸಾಧನೆ ಎಂದು ಬಿಜೆಪಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ಖಂಡನೀಯ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ್ ದೂರಿದ್ದಾರೆ.</p>.<p>ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಟಗುಪ್ಪ ಸೇತುವೆ ಮಾರ್ಗವಾಗಿ ಸಾಗರ ಬಲು ಹತ್ತಿರವಾದ ಮಾರ್ಗವಾಗಿದೆ. ಸುತ್ತಲೂ ಮುಳುಗಡೆ ಹಿನ್ನೀರು ತುಂಬಿರುವ ಕಾರಣ ಈ ಭಾಗದ ಜನರು ಸುತ್ತುವರಿದು ಹೋಗಬೇಕಾಗಿತ್ತು. ಜನರು ಸೇತುವೆ ಬೇಡಿಕೆ ಇಟ್ಟಿದ್ದರು. 2007ರಲ್ಲಿ ಜೆಡಿಎಸ್ ಸರ್ಕಾರ ಇದ್ದಾಗ ರೇವಣ್ಣ ಅವರ ಅವದಿಯಲ್ಲಿ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಈ ಭಾಗದ ಮುಖಂಡರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಲ್ಲಿ ಬೇಡಿಕೆ ಇಟ್ಟು ಹೋರಾಟ ನಡೆಸಿದ್ದರ ಫಲವಾಗಿ ಇಂದು ಸೇತುವೆಯ ಕನಸು ನನಸಾಗಿದೆ’ ಎಂದರು.</p>.<p>‘ಸೇತುವೆ ನಿರ್ಮಾಣವನ್ನು ಇಲ್ಲಿನ ಶಾಸಕರು ಮತ್ತು ಬಿಜೆಪಿ ಪಕ್ಷದ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ. ಜನರನ್ನು ಹಾದಿ ತಪ್ಪಿಸುತ್ತಿದೆ. ಇದು ಸರಿಯಲ್ಲ’ ಎಂದು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸನಗರ: </strong>‘ಪಟಗುಪ್ಪ ಸೇತುವೆ ನಿರ್ಮಾಣ ಬಿಜೆಪಿಯ ಸಾಧನೆಯಲ್ಲ. ಅದು ಈ ಭಾಗದ ಜನರ ಆಶೋತ್ತರದ ಪ್ರತೀಕವಾಗಿ ನಿರ್ಮಾಣವಾಗಿದೆ. ಸೇತುವೆ ನಿರ್ಮಾಣವನ್ನು ಪಕ್ಷದ ಸಾಧನೆ ಎಂದು ಬಿಜೆಪಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ಖಂಡನೀಯ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ್ ದೂರಿದ್ದಾರೆ.</p>.<p>ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಟಗುಪ್ಪ ಸೇತುವೆ ಮಾರ್ಗವಾಗಿ ಸಾಗರ ಬಲು ಹತ್ತಿರವಾದ ಮಾರ್ಗವಾಗಿದೆ. ಸುತ್ತಲೂ ಮುಳುಗಡೆ ಹಿನ್ನೀರು ತುಂಬಿರುವ ಕಾರಣ ಈ ಭಾಗದ ಜನರು ಸುತ್ತುವರಿದು ಹೋಗಬೇಕಾಗಿತ್ತು. ಜನರು ಸೇತುವೆ ಬೇಡಿಕೆ ಇಟ್ಟಿದ್ದರು. 2007ರಲ್ಲಿ ಜೆಡಿಎಸ್ ಸರ್ಕಾರ ಇದ್ದಾಗ ರೇವಣ್ಣ ಅವರ ಅವದಿಯಲ್ಲಿ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಈ ಭಾಗದ ಮುಖಂಡರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಲ್ಲಿ ಬೇಡಿಕೆ ಇಟ್ಟು ಹೋರಾಟ ನಡೆಸಿದ್ದರ ಫಲವಾಗಿ ಇಂದು ಸೇತುವೆಯ ಕನಸು ನನಸಾಗಿದೆ’ ಎಂದರು.</p>.<p>‘ಸೇತುವೆ ನಿರ್ಮಾಣವನ್ನು ಇಲ್ಲಿನ ಶಾಸಕರು ಮತ್ತು ಬಿಜೆಪಿ ಪಕ್ಷದ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ. ಜನರನ್ನು ಹಾದಿ ತಪ್ಪಿಸುತ್ತಿದೆ. ಇದು ಸರಿಯಲ್ಲ’ ಎಂದು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>