<p><strong>ಶಿವಮೊಗ್ಗ:</strong> ಹೊಳೆಹೊನ್ನೂರು ಮಾರ್ಗದ ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದೆ.</p>.<p>ಹೊಳೆಹೊನ್ನೂರು ಮಾರ್ಗದ ಗುಡ್ಡೇಕಲ್ನಿಂದ ಆರಂಭವಾಗಿ ವಿದ್ಯಾನಗರ ಬಿ.ಎಚ್.ರಸ್ತೆಗೆ ವೃತ್ತಾಕಾರದಲ್ಲಿ ಸೇತುವೆ ಸಂಪರ್ಕ ಕಲ್ಪಿಸಲಿದೆ. ₹ 40 ಕೋಟಿವೆಚ್ಚದಲ್ಲಿ 600 ಮೀಟರ್ ಸೇತುವೆನಿರ್ಮಾಣವಾಗಲಿದೆ. ಭದ್ರಾವತಿ ಮಾರ್ಗದ ಕಡದಕಟ್ಟೆ, ಸವಳಂಗ ರಸ್ತೆ, ಸೋಮಿನಕೊಪ್ಪ ರಸ್ತೆಯಲ್ಲೂ ಮೇಲು ಸೇತುವೆ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p><strong>ಶಿಕಾರಿಪುರ ರೈಲು ಮಾರ್ಗ ಸ್ವಾಧೀನ ಆರಂಭ</strong></p>.<p>ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ ನಿರ್ಮಾಣ ಪ್ರಕ್ರಿಯೆ ಆರಂಭವಾಗಿವೆ.ಕೇಂದ್ರದ ಬಜೆಟ್ನಲ್ಲಿ ಅನುದಾನಮೀಸಲಿಡಲಾಗಿದೆ.ರಾಜ್ಯ ಸರ್ಕಾರವೂ ನೆರವು ನೀಡುತ್ತಿದೆ. ₨994 ಕೋಟಿ ವೆಚ್ಚದಲ್ಲಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಸುಮಾರು 49 ಹಳ್ಳಿಗಳ 1,365 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುವುದು. ಕೆಐಎಡಿಬಿಗೆ ಸ್ವಾಧೀನದ ಹೊಣೆ ನೀಡಲಾಗಿದೆ.4 ತಿಂಗಳಲ್ಲಿ ಸ್ವಾಧೀನ ಪ್ರಕ್ರಿಯೆ ಮುಗಿದುಕೇಂದ್ರಕ್ಕೆ ಹಸ್ತಾಂತರಿಸಲಾಗುವುದು ಎಂದರು.</p>.<p><strong>ಶಿವಮೊಗ್ಗದಲ್ಲಿ ಕೋಚಿಂಗ್ ಡಿಪೊ</strong></p>.<p>ಶಿವಮೊಗ್ಗ ಹೊರವಲಯದ ಕೋಟೆಗಂಗೂರಿನಲ್ಲಿರೈಲ್ವೆ ಕೋಚಿಂಗ್ ಡಿಪೊಆರಂಭಿಸಲು ₹62 ಕೋಟಿ ಬಿಡುಗಡೆಯಾಗಲಿದೆ.ಈ ವೆಚ್ಚ ₹100 ಕೋಟಿ ದಾಟಬಹುದು. ಈಗಿರುವ 16 ಎಕರೆ ಜಾಗದ ಜತೆಗೆಇನ್ನೂ10 ಎಕರೆನೀಡಲಾಗುವುದು. ತಾಳಗುಪ್ಪ-ಸಿದ್ದಾಪುರ-ಹುಬ್ಬಳ್ಳಿ ಮಾರ್ಗದ ಸರ್ವೆ ಕಾರ್ಯಕ್ಕೆ ₹79 ಲಕ್ಷ ಬಿಡುಗಡೆಯಾಗಿದೆ. ಶಿವಮೊಗ್ಗ -ಶೃಂಗೇರಿ-ಮಂಗಳೂರು ರೈಲು ಮಾರ್ಗದ ಯೋಜನೆ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ವಿವರ ನೀಡಿದರು.</p>.<p><strong>ರಸ್ತೆ ಮಾರ್ಗಗಳಿಗೆ₹45 ಕೋಟಿ</strong></p>.<p>ಜಿಲ್ಲೆಯಲ್ಲಿ ಹಾದು ಹೋಗಿರುವ ರಸ್ತೆಗಳವಿಸ್ತರಣೆ ಮತ್ತು ಅಭಿವೃದ್ಧಿಗೆಕೇಂದ್ರ ಸರ್ಕಾರ ₹45 ಕೋಟಿ ವಿಶೇಷ ಅನುದಾನ ನೀಡಿದೆ. ಸಾಗರ-ತಾಳಗುಪ್ಪಮಾರ್ಗಕ್ಕೆ ₹4.5 ಕೋಟಿ, ಸಾಗರ–ಬೈಂದೂರು ಮಾರ್ಗಕ್ಕೆ ₹8 ಕೋಟಿ, ಸಿಗಂದೂರು ರಸ್ತೆಗೆ ₹4.5 ಕೋಟಿ, ರಾಷ್ಟ್ರೀಯ ಹೆದ್ದಾರಿ ಸಾಗರ-ತುಪ್ಪೂರು ರಸ್ತೆ ಅಗಲಕ್ಕೆ ₹11 ಕೋಟಿ, ಶಿಕಾರಿಪುರ-ರಾಣೆಬೆನ್ನೂರು ರಸ್ತೆಗೆ ₹8 ಕೋಟಿ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.</p>.<p>ಭದ್ರಾವತಿ ತಾಲ್ಲೂಕು ಕಾರೇಹಳ್ಳಿಯಿಂದ ಶಿವಮೊಗ್ಗದ ಶ್ರೀರಾಂಪುರದವರೆಗೆ ರಾಷ್ಟ್ರೀಯ ಹೆದ್ದಾರಿ 206 ಅಭಿವೃದ್ಧಿಪಡಿಸಲಾಗುವುದು. 15 ಹಳ್ಳಿಗಳಲ್ಲಿ ಭೂಸ್ವಾಧೀನಪ್ರಕ್ರಿಯೆ ಆರಂಭವಾಗಲಿದೆ. ₹96 ಕೋಟಿ ಪರಿಹಾರ ನೀಡಲಾಗುವುದು ಎಂದರು.</p>.<p><strong>2,200 ಮೀಟರ್ಗೆ ಹಿಗ್ಗಿದ ವಿಮಾನ ರನ್ವೇ</strong></p>.<p>ವಿಮಾನನಿಲ್ದಾಣ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ. ರೈಟ್ಸ್ ಕಂಪನಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರುಕಂಪನಿಗೆನಿರ್ಮಾಣದಜವಾಬ್ದಾರಿ ನೀಡಲಾಗಿದೆ.ಹಿಂದೆ 1,200 ಮೀಟರ್ ರನ್ವೇಇತ್ತು. ಈಗ 2,200 ಮೀಟರ್ಗೆಹೆಚ್ಚಿಸಲಾಗಿದೆ. ಇದರಿಂದ ಹೆಚ್ಚು ಆಸನವುಳ್ಳ ವಿಮಾನಗಳ ಹಾರಾಟಕ್ಕೆ ಅನುಕೂಲವಾಗುತ್ತದೆ. ₹25 ಕೋಟಿ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಒಟ್ಟು ವೆಚ್ಚ ₹45 ಕೋಟಿಯಿಂದ ₹140 ಕೋಟಿಗೆ ಹೆಚ್ಚಿಸಲಾಗಿದೆ. ನಿಲ್ದಾಣ ಮುಗಿದ ನಂತರ ವಿಮಾನಗಳ ಹಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದರು.</p>.<p>ಪತ್ರಿಕಾಗೋಷ್ಠಿಯಲ್ಲಿ ರೈಲ್ವೆ ಅಧಿಕಾರಿ ಶ್ರೀಧರಮೂರ್ತಿ,ಸಲಹಾ ಸಮಿತಿ ಸದಸ್ಯ ಮಾಲತೇಶ್, ಎಸ್.ಎಸ್.ಜ್ಯೋತಿ ಪ್ರಕಾಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಹೊಳೆಹೊನ್ನೂರು ಮಾರ್ಗದ ರೈಲ್ವೆ ಮೇಲು ಸೇತುವೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದೆ.</p>.<p>ಹೊಳೆಹೊನ್ನೂರು ಮಾರ್ಗದ ಗುಡ್ಡೇಕಲ್ನಿಂದ ಆರಂಭವಾಗಿ ವಿದ್ಯಾನಗರ ಬಿ.ಎಚ್.ರಸ್ತೆಗೆ ವೃತ್ತಾಕಾರದಲ್ಲಿ ಸೇತುವೆ ಸಂಪರ್ಕ ಕಲ್ಪಿಸಲಿದೆ. ₹ 40 ಕೋಟಿವೆಚ್ಚದಲ್ಲಿ 600 ಮೀಟರ್ ಸೇತುವೆನಿರ್ಮಾಣವಾಗಲಿದೆ. ಭದ್ರಾವತಿ ಮಾರ್ಗದ ಕಡದಕಟ್ಟೆ, ಸವಳಂಗ ರಸ್ತೆ, ಸೋಮಿನಕೊಪ್ಪ ರಸ್ತೆಯಲ್ಲೂ ಮೇಲು ಸೇತುವೆ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p><strong>ಶಿಕಾರಿಪುರ ರೈಲು ಮಾರ್ಗ ಸ್ವಾಧೀನ ಆರಂಭ</strong></p>.<p>ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ ನಿರ್ಮಾಣ ಪ್ರಕ್ರಿಯೆ ಆರಂಭವಾಗಿವೆ.ಕೇಂದ್ರದ ಬಜೆಟ್ನಲ್ಲಿ ಅನುದಾನಮೀಸಲಿಡಲಾಗಿದೆ.ರಾಜ್ಯ ಸರ್ಕಾರವೂ ನೆರವು ನೀಡುತ್ತಿದೆ. ₨994 ಕೋಟಿ ವೆಚ್ಚದಲ್ಲಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಸುಮಾರು 49 ಹಳ್ಳಿಗಳ 1,365 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುವುದು. ಕೆಐಎಡಿಬಿಗೆ ಸ್ವಾಧೀನದ ಹೊಣೆ ನೀಡಲಾಗಿದೆ.4 ತಿಂಗಳಲ್ಲಿ ಸ್ವಾಧೀನ ಪ್ರಕ್ರಿಯೆ ಮುಗಿದುಕೇಂದ್ರಕ್ಕೆ ಹಸ್ತಾಂತರಿಸಲಾಗುವುದು ಎಂದರು.</p>.<p><strong>ಶಿವಮೊಗ್ಗದಲ್ಲಿ ಕೋಚಿಂಗ್ ಡಿಪೊ</strong></p>.<p>ಶಿವಮೊಗ್ಗ ಹೊರವಲಯದ ಕೋಟೆಗಂಗೂರಿನಲ್ಲಿರೈಲ್ವೆ ಕೋಚಿಂಗ್ ಡಿಪೊಆರಂಭಿಸಲು ₹62 ಕೋಟಿ ಬಿಡುಗಡೆಯಾಗಲಿದೆ.ಈ ವೆಚ್ಚ ₹100 ಕೋಟಿ ದಾಟಬಹುದು. ಈಗಿರುವ 16 ಎಕರೆ ಜಾಗದ ಜತೆಗೆಇನ್ನೂ10 ಎಕರೆನೀಡಲಾಗುವುದು. ತಾಳಗುಪ್ಪ-ಸಿದ್ದಾಪುರ-ಹುಬ್ಬಳ್ಳಿ ಮಾರ್ಗದ ಸರ್ವೆ ಕಾರ್ಯಕ್ಕೆ ₹79 ಲಕ್ಷ ಬಿಡುಗಡೆಯಾಗಿದೆ. ಶಿವಮೊಗ್ಗ -ಶೃಂಗೇರಿ-ಮಂಗಳೂರು ರೈಲು ಮಾರ್ಗದ ಯೋಜನೆ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ವಿವರ ನೀಡಿದರು.</p>.<p><strong>ರಸ್ತೆ ಮಾರ್ಗಗಳಿಗೆ₹45 ಕೋಟಿ</strong></p>.<p>ಜಿಲ್ಲೆಯಲ್ಲಿ ಹಾದು ಹೋಗಿರುವ ರಸ್ತೆಗಳವಿಸ್ತರಣೆ ಮತ್ತು ಅಭಿವೃದ್ಧಿಗೆಕೇಂದ್ರ ಸರ್ಕಾರ ₹45 ಕೋಟಿ ವಿಶೇಷ ಅನುದಾನ ನೀಡಿದೆ. ಸಾಗರ-ತಾಳಗುಪ್ಪಮಾರ್ಗಕ್ಕೆ ₹4.5 ಕೋಟಿ, ಸಾಗರ–ಬೈಂದೂರು ಮಾರ್ಗಕ್ಕೆ ₹8 ಕೋಟಿ, ಸಿಗಂದೂರು ರಸ್ತೆಗೆ ₹4.5 ಕೋಟಿ, ರಾಷ್ಟ್ರೀಯ ಹೆದ್ದಾರಿ ಸಾಗರ-ತುಪ್ಪೂರು ರಸ್ತೆ ಅಗಲಕ್ಕೆ ₹11 ಕೋಟಿ, ಶಿಕಾರಿಪುರ-ರಾಣೆಬೆನ್ನೂರು ರಸ್ತೆಗೆ ₹8 ಕೋಟಿ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.</p>.<p>ಭದ್ರಾವತಿ ತಾಲ್ಲೂಕು ಕಾರೇಹಳ್ಳಿಯಿಂದ ಶಿವಮೊಗ್ಗದ ಶ್ರೀರಾಂಪುರದವರೆಗೆ ರಾಷ್ಟ್ರೀಯ ಹೆದ್ದಾರಿ 206 ಅಭಿವೃದ್ಧಿಪಡಿಸಲಾಗುವುದು. 15 ಹಳ್ಳಿಗಳಲ್ಲಿ ಭೂಸ್ವಾಧೀನಪ್ರಕ್ರಿಯೆ ಆರಂಭವಾಗಲಿದೆ. ₹96 ಕೋಟಿ ಪರಿಹಾರ ನೀಡಲಾಗುವುದು ಎಂದರು.</p>.<p><strong>2,200 ಮೀಟರ್ಗೆ ಹಿಗ್ಗಿದ ವಿಮಾನ ರನ್ವೇ</strong></p>.<p>ವಿಮಾನನಿಲ್ದಾಣ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ. ರೈಟ್ಸ್ ಕಂಪನಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರುಕಂಪನಿಗೆನಿರ್ಮಾಣದಜವಾಬ್ದಾರಿ ನೀಡಲಾಗಿದೆ.ಹಿಂದೆ 1,200 ಮೀಟರ್ ರನ್ವೇಇತ್ತು. ಈಗ 2,200 ಮೀಟರ್ಗೆಹೆಚ್ಚಿಸಲಾಗಿದೆ. ಇದರಿಂದ ಹೆಚ್ಚು ಆಸನವುಳ್ಳ ವಿಮಾನಗಳ ಹಾರಾಟಕ್ಕೆ ಅನುಕೂಲವಾಗುತ್ತದೆ. ₹25 ಕೋಟಿ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಒಟ್ಟು ವೆಚ್ಚ ₹45 ಕೋಟಿಯಿಂದ ₹140 ಕೋಟಿಗೆ ಹೆಚ್ಚಿಸಲಾಗಿದೆ. ನಿಲ್ದಾಣ ಮುಗಿದ ನಂತರ ವಿಮಾನಗಳ ಹಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದರು.</p>.<p>ಪತ್ರಿಕಾಗೋಷ್ಠಿಯಲ್ಲಿ ರೈಲ್ವೆ ಅಧಿಕಾರಿ ಶ್ರೀಧರಮೂರ್ತಿ,ಸಲಹಾ ಸಮಿತಿ ಸದಸ್ಯ ಮಾಲತೇಶ್, ಎಸ್.ಎಸ್.ಜ್ಯೋತಿ ಪ್ರಕಾಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>