ಜಿಲ್ಲಾಡಳಿತ ಈ ಅಲೆಮಾರಿಗಳಿಗಾಗಿ ವೀರಣ್ಣನಬೆನವಳ್ಳಿ ಗ್ರಾಮದ ಸರ್ವೆ ನಂಬರ್ 78ರಲ್ಲಿ 4 ಎಕರೆ ಜಮೀನು ನೀಡಿದೆ. ಆದರೆ, ಅಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲ. ಅಲ್ಲಿ ಸೌಕರ್ಯ ಕಲ್ಪಿಸಬೇಕು. ಪಡಿತರ, ಆಧಾರ್ ಕಾರ್ಡ್ ನೀಡಬೇಕು. ಮನೆ ಕಟ್ಟಿಸಿಕೊಡಬೇಕು. ಮತದಾನದ ಹಕ್ಕು ಕೊಡಬೇಕು, ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಕಾರ್ಯಕ್ರಮ ರೂಪಿಸಬೇಕು. ರುದ್ರಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಬಿಎಸ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಡಿ.ಶಿವಪ್ಪ, ಮುಖಂಡರಾದ ಮಾರುತಿ, ತಮ್ಮಡಿಹಳ್ಳಿ ಲೋಕೇಶ್, ರಾಜು, ರವಿ, ಲಕ್ಷ್ಮಿಪತಿ, ಗೌರಮ್ಮ, ರೂಪಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.