<p><strong>ಸಾಗರ:</strong> ಚಂದನವನದ ನಟ ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅವರ ನಿಧನದ ಸುದ್ದಿಯನ್ನು ಕೇಳುತ್ತಿದ್ದಂತೆ ತಾಲ್ಲೂಕಿನ ಜನರು ಶೋಕ ಸಾಗರದಲ್ಲಿ ಮುಳುಗಿದರು.</p>.<p>ಸರ್ಕಾರಿ ಕಚೇರಿಗಳಲ್ಲಿ, ಹೋಟೆಲ್ಗಳಲ್ಲಿ, ಅಂಗಡಿಗಳಲ್ಲಿ ಹೀಗೆ ಎಲ್ಲಿ ನೋಡಿದರೂ ಪುನೀತ್ ಸಾವಿನ ಸುದ್ದಿಯ ಕುರಿತು ಚರ್ಚೆ ನಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಯುವ ನಟನ ಅಕಾಲಿಕ ಮರಣಕ್ಕೆ ಪ್ರತಿಯೊಬ್ಬರೂ ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದರು.</p>.<p>ಪುನೀತ್ ಅವರ ನಿಧನಕ್ಕೆ ಕ್ಷೇತ್ರದ ಶಾಸಕ ಎಚ್. ಹಾಲಪ್ಪ ಹರತಾಳು ಸಂತಾಪ ಸೂಚಿಸಿದ್ದಾರೆ. ‘ಇತ್ತೀಚೆಗೆ ನಡೆದ ನನ್ನ ಪುತ್ರಿಯ ಮದುವೆ ಸಮಾರಂಭದಲ್ಲಿ ಪುನೀತ್ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಪುನೀತ್ ಅವರಿಗೆ ನಾನು ಸರ್ ಎಂದು ಸಂಬೋಧಿಸಿದ್ದೆ. ಅದಕ್ಕೆ ಅವರು ‘ನೀವು ಹಾಗೆಲ್ಲ ಸರ್ ಎಂದು<br />ಕರೆಯಬಾರದು. ನೀವೆಲ್ಲಾ ನನ್ನ ಬಂಧುಗಳು’ ಎಂದು ವಿನೀತರಾಗಿ ಹೇಳಿದ್ದನ್ನು ಹಾಲಪ್ಪ ಅವರು ನೆನಪಿಸಿಕೊಂಡಿದ್ದಾರೆ.</p>.<p class="Subhead">ಬೇಳೂರು ಕಂಬನಿ: ಪುನೀತ್ ಅವರ ಅಗಲಿಕೆಗೆ ಕ್ಷೇತ್ರದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಕಂಬನಿ ಮಿಡಿದಿದ್ದಾರೆ. ‘ಪುನೀತ್ ಓರ್ವ ಶ್ರೇಷ್ಠ ನಟ ಮಾತ್ರವಲ್ಲ. ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಜನಾನುರಾಗಿಯಾಗಿದ್ದ ಕಲಾವಿದ ಎಂಬುದನ್ನು ಮರೆಯುವಂತಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.</p>.<p>ಇಲ್ಲಿನ ಸಾಗರ್ ಹೋಟೆಲ್ ವೃತ್ತದಲ್ಲಿ ಶುಕ್ರವಾರ ಸಂಜೆ ವಿವಿಧ ಸಂಘಟನೆಗಳ ಪ್ರಮುಖರು ಪುನೀತ್ ಭಾವಚಿತ್ರಕ್ಕೆ ಮೇಣದ ಬತ್ತಿ ಹಚ್ಚುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು, ‘ದೊಡ್ಮನೆ ಕುಟುಂಬದ ಚಿಕ್ಕ ರಾಜಕುಮಾರನಂತಿದ್ದ ಪುನೀತ್ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಕನ್ನಡ ನಾಡು ಓರ್ವ ಶ್ರೇಷ್ಠ ನಟನನ್ನು ಕಳೆದುಕೊಂಡಿದೆ’ ಎಂದರು.</p>.<p>ಚಿತ್ರನಟ, ರಂಗಭೂಮಿ ಕಲಾವಿದ ಯೇಸುಪ್ರಕಾಶ್, ‘ಪುನೀತ್ ನಿಧನ ಅರಗಿಸಿಕೊಳ್ಳಲಾಗದ ಅನ್ಯಾಯ. ಚಿತ್ರೀಕರಣದ ವೇಳೆ ಲೈಟ್ ಬಾಯ್ಗಳಿಂದ ಹಿಡಿದು ಸಣ್ಣಪುಟ್ಟ ಕಲಾವಿದರೊಂದಿಗೂ ಪುನೀತ್ ಆತ್ಮೀಯತೆಯಿಂದ ಬೆರೆಯುತ್ತಿದ್ದ ರೀತಿಯನ್ನು ಮರೆಯಲು ಸಾಧ್ಯವೇ ಇಲ್ಲ. ಅಂತಹ ಸಂಸ್ಕಾರಯುತ ಕಲಾವಿದರು ಸಿಗುವುದು ವಿರಳ’ ಎಂದು<br />ಹೇಳಿದರು.</p>.<p>ನಗರಸಭೆ ಸದಸ್ಯ ಸಂತೋಷ್ ಆರ್. ಶೇಟ್, ಮಧುಮಾಲತಿ, ಪ್ರಮುಖರಾದ ಡಿ. ದಿನೇಶ್, ಅರುಣ್ ಕುಗ್ವೆ, ಆರ್ಥರ್ ಗೋಮ್ಸ್, ಕಾಂತು, ಪ್ರಕಾಶ್, ಜಿ.ಕೆ. ಭೈರಪ್ಪ, ಸಿದ್ದಪ್ಪ ಕೆ. ನವೀನ್ಇದ್ದರು.</p>.<p>ಅಗ್ರಹಾರ ವೃತ್ತದಲ್ಲಿರುವ ಹೋಟೆಲ್ ಸದ್ಗುರು ಆವರಣದಲ್ಲಿ ಪುನೀತ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಗೌರವ ಸಲ್ಲಿಸಿದರು. ಪ್ರಾಂತ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪ್ರಸಾದ್, ಸದ್ಗುರು ಸಂತೋಷ್, ಯಶವಂತ ಫಣಿ, ರಫೀಕ್ ಕೊಪ್ಪ, ಜಮೀಲ್ ಸಾಗರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ:</strong> ಚಂದನವನದ ನಟ ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಅವರ ನಿಧನದ ಸುದ್ದಿಯನ್ನು ಕೇಳುತ್ತಿದ್ದಂತೆ ತಾಲ್ಲೂಕಿನ ಜನರು ಶೋಕ ಸಾಗರದಲ್ಲಿ ಮುಳುಗಿದರು.</p>.<p>ಸರ್ಕಾರಿ ಕಚೇರಿಗಳಲ್ಲಿ, ಹೋಟೆಲ್ಗಳಲ್ಲಿ, ಅಂಗಡಿಗಳಲ್ಲಿ ಹೀಗೆ ಎಲ್ಲಿ ನೋಡಿದರೂ ಪುನೀತ್ ಸಾವಿನ ಸುದ್ದಿಯ ಕುರಿತು ಚರ್ಚೆ ನಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಯುವ ನಟನ ಅಕಾಲಿಕ ಮರಣಕ್ಕೆ ಪ್ರತಿಯೊಬ್ಬರೂ ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದರು.</p>.<p>ಪುನೀತ್ ಅವರ ನಿಧನಕ್ಕೆ ಕ್ಷೇತ್ರದ ಶಾಸಕ ಎಚ್. ಹಾಲಪ್ಪ ಹರತಾಳು ಸಂತಾಪ ಸೂಚಿಸಿದ್ದಾರೆ. ‘ಇತ್ತೀಚೆಗೆ ನಡೆದ ನನ್ನ ಪುತ್ರಿಯ ಮದುವೆ ಸಮಾರಂಭದಲ್ಲಿ ಪುನೀತ್ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಪುನೀತ್ ಅವರಿಗೆ ನಾನು ಸರ್ ಎಂದು ಸಂಬೋಧಿಸಿದ್ದೆ. ಅದಕ್ಕೆ ಅವರು ‘ನೀವು ಹಾಗೆಲ್ಲ ಸರ್ ಎಂದು<br />ಕರೆಯಬಾರದು. ನೀವೆಲ್ಲಾ ನನ್ನ ಬಂಧುಗಳು’ ಎಂದು ವಿನೀತರಾಗಿ ಹೇಳಿದ್ದನ್ನು ಹಾಲಪ್ಪ ಅವರು ನೆನಪಿಸಿಕೊಂಡಿದ್ದಾರೆ.</p>.<p class="Subhead">ಬೇಳೂರು ಕಂಬನಿ: ಪುನೀತ್ ಅವರ ಅಗಲಿಕೆಗೆ ಕ್ಷೇತ್ರದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಕಂಬನಿ ಮಿಡಿದಿದ್ದಾರೆ. ‘ಪುನೀತ್ ಓರ್ವ ಶ್ರೇಷ್ಠ ನಟ ಮಾತ್ರವಲ್ಲ. ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಜನಾನುರಾಗಿಯಾಗಿದ್ದ ಕಲಾವಿದ ಎಂಬುದನ್ನು ಮರೆಯುವಂತಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.</p>.<p>ಇಲ್ಲಿನ ಸಾಗರ್ ಹೋಟೆಲ್ ವೃತ್ತದಲ್ಲಿ ಶುಕ್ರವಾರ ಸಂಜೆ ವಿವಿಧ ಸಂಘಟನೆಗಳ ಪ್ರಮುಖರು ಪುನೀತ್ ಭಾವಚಿತ್ರಕ್ಕೆ ಮೇಣದ ಬತ್ತಿ ಹಚ್ಚುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು, ‘ದೊಡ್ಮನೆ ಕುಟುಂಬದ ಚಿಕ್ಕ ರಾಜಕುಮಾರನಂತಿದ್ದ ಪುನೀತ್ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ. ಕನ್ನಡ ನಾಡು ಓರ್ವ ಶ್ರೇಷ್ಠ ನಟನನ್ನು ಕಳೆದುಕೊಂಡಿದೆ’ ಎಂದರು.</p>.<p>ಚಿತ್ರನಟ, ರಂಗಭೂಮಿ ಕಲಾವಿದ ಯೇಸುಪ್ರಕಾಶ್, ‘ಪುನೀತ್ ನಿಧನ ಅರಗಿಸಿಕೊಳ್ಳಲಾಗದ ಅನ್ಯಾಯ. ಚಿತ್ರೀಕರಣದ ವೇಳೆ ಲೈಟ್ ಬಾಯ್ಗಳಿಂದ ಹಿಡಿದು ಸಣ್ಣಪುಟ್ಟ ಕಲಾವಿದರೊಂದಿಗೂ ಪುನೀತ್ ಆತ್ಮೀಯತೆಯಿಂದ ಬೆರೆಯುತ್ತಿದ್ದ ರೀತಿಯನ್ನು ಮರೆಯಲು ಸಾಧ್ಯವೇ ಇಲ್ಲ. ಅಂತಹ ಸಂಸ್ಕಾರಯುತ ಕಲಾವಿದರು ಸಿಗುವುದು ವಿರಳ’ ಎಂದು<br />ಹೇಳಿದರು.</p>.<p>ನಗರಸಭೆ ಸದಸ್ಯ ಸಂತೋಷ್ ಆರ್. ಶೇಟ್, ಮಧುಮಾಲತಿ, ಪ್ರಮುಖರಾದ ಡಿ. ದಿನೇಶ್, ಅರುಣ್ ಕುಗ್ವೆ, ಆರ್ಥರ್ ಗೋಮ್ಸ್, ಕಾಂತು, ಪ್ರಕಾಶ್, ಜಿ.ಕೆ. ಭೈರಪ್ಪ, ಸಿದ್ದಪ್ಪ ಕೆ. ನವೀನ್ಇದ್ದರು.</p>.<p>ಅಗ್ರಹಾರ ವೃತ್ತದಲ್ಲಿರುವ ಹೋಟೆಲ್ ಸದ್ಗುರು ಆವರಣದಲ್ಲಿ ಪುನೀತ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಗೌರವ ಸಲ್ಲಿಸಿದರು. ಪ್ರಾಂತ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪ್ರಸಾದ್, ಸದ್ಗುರು ಸಂತೋಷ್, ಯಶವಂತ ಫಣಿ, ರಫೀಕ್ ಕೊಪ್ಪ, ಜಮೀಲ್ ಸಾಗರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>