‘ಶಿವಮೊಗ್ಗ–ರಾಣೆಬೆನ್ನೂರು ಮಧ್ಯೆ ರೈಲು ಸಂಪರ್ಕ ಕಲ್ಪಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ನಾನು ಅವಿರತ ಪ್ರಯತ್ನ ನಡೆಸಿದ್ದೆವು. ಅಧಿಕಾರಿಗಳ ತಂಡ ರಾಣೆಬೆನ್ನೂರಿನಿಂದ ಶಿಕಾರಿಪುರ, ಶಿವಮೊಗ್ಗವರೆಗೆ ಸ್ಥಳ ಪರಿಶೀಲನೆ ನಡೆಸಿದೆ. ಅಧಿಕಾರಿಗಳು ಭೂ ಸ್ವಾಧೀನ, ಸ್ಥಳೀಯ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ’ ಎಂದು ವಿವರ ನೀಡಿದರು.