ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೇಲ್ಮನೆ ಎಂಬುದು ಹಿರಿಯರ ಹಾಗೂ ಅನುಭವಿಗಳ, ಚಿಂತಕರ ಚಾವಡಿ. ಅಲ್ಲಿ ನಡೆಯುವ ಪ್ರತಿಯೊಂದು ವಿಚಾರಧಾರೆಗಳು ಪ್ರಬುದ್ಧಮಾನದಲ್ಲಿ ಇರುತ್ತವೆ. ಇಲ್ಲಿ ಸೇವೆ ಸಲ್ಲಿಸುವ ಮನೋಭಾವ ಹೊಂದಿರುವವರು, ಪ್ರಜ್ಞಾವಂತ ಹಾಗೂ ಪ್ರಾಮಾಣಿಕರಾಗಿರಬೇಕು. ನೌಕರರ ಸಮಸ್ಯೆಗಳ ಅರಿವು ಇರಬೇಕು’ ಎಂದರು.