<p><strong>ಸಾಗರ</strong>: ಇಲ್ಲಿನ ನೆಹರೂ ಮೈದಾನದಲ್ಲಿ ಮಾರಿಕಾಂಬಾ ಜಾತ್ರೆ ಅಂಗವಾಗಿ ಶುಕ್ರವಾರ ನಡೆದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕುಸ್ತಿ ಚಾಂಪಿಯನ್ಷಿಪ್ ಪ್ರೇಕ್ಷಕರ ಮನಸೂರೆಗೊಂಡಿತು.</p>.<p>ದೇಶದ ವಿವಿಧ ಭಾಗಗಳಿಂದ ಬಂದಿದ್ದ ಪೈಲ್ವಾನರ ಪಟ್ಟು, ಪ್ರತಿಪಟ್ಟುಗಳನ್ನು ಕಂಡು ನೋಡುಗರು ಪುಳಕಿತರಾದರು. </p>.<p>ಮಥುರಾದ ರಾಮ್ ಹಾಗೂ ಶಿಕಾರಿಪುರ ತಾಲ್ಲೂಕಿನ ಮಾಸೂರಿನ ಅಕ್ರಂ ಅವರ ನಡುವೆ 15 ನಿಮಿಷಗಳವರೆಗೆ ಜಂಗಿ ಕುಸ್ತಿ ನಡೆಯಿತು. ನಿಗದಿತ 10 ನಿಮಿಷಗಳಲ್ಲಿ ಇಬ್ಬರೂ ಸಮಬಲದ ಹೋರಾಟ ನಡೆಸಿದರು.</p>.<p>ಹೀಗಾಗಿ ಸಂಘಟಕರು ಹೆಚ್ಚುವರಿಯಾಗಿ 5 ನಿಮಿಷಗಳ ಕಾಲಾವಕಾಶ ನೀಡಿದರು. ಈ ಅವಧಿಯಲ್ಲಿ ತುರುಸಿನ ಪೈಪೋಟಿ ಕಂಡುಬಂತು. ಬಿಗಿ ಪಟ್ಟುಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ರಾಮ್, ಕುಸ್ತಿ ಇನ್ನೇನು ಮುಗಿಯಬೇಕು ಎನ್ನುವ ಹೊತ್ತಿಗೆ ಎದುರಾಳಿಯನ್ನು ಚಿತ್ ಮಾಡಿ ಸಂಭ್ರಮಿಸಿದರು.</p>.<p>ಬೆಳಗಾವಿಯ ಅಪ್ಪಾ ಸಾಹೇಬ್– ಸಾಂಗ್ಲಿಯ ಲೋಕೇಶ್ ವಿರುದ್ಧ, ಕೊಳಗಿಯ ಮಾರುತಿ– ಬ್ಯಾಡಗಿಯ ಮಂಜು ವಿರುದ್ಧ, ದಾವಣಗೆರೆಯ ಇರ್ಫಾನ್ (ಮೂಕ ಪೈಲ್ವಾನ್)– ತರೀಕೆರೆಯ ಪ್ರದೀಪ್ ವಿರುದ್ಧ, ಕಪ್ಪನಹಳ್ಳಿಯ ಸತೀಶ್– ಶಿವಮೊಗ್ಗದ ವಿನಯ್ ವಿರುದ್ಧ ಗೆಲುವು ಸಾಧಿಸಿದರು.</p>.<p>ದಾವಣಗೆರೆಯ ಮಾರುತಿ ಹಾಗೂ ಭದ್ರಾವತಿಯ ಚೆನ್ನಕಿಶೋರ ಅವರ ನಡುವೆ ನಡೆದ ಕುಸ್ತಿ ಸಮಬಲದಲ್ಲಿ ಮುಕ್ತಾಯಗೊಂಡಿತು. ಮಾಜಿ ಪೈಲ್ವಾನ್ ಕೆಂಚಪ್ಪ, ಲೋಕೇಶ್, ಬಸವರಾಜ್ ತೀರ್ಪುಗಾರರಾಗಿದ್ದರು. ಶನಿವಾರ ಮತ್ತು ಭಾನುವಾರವೂ ಕುಸ್ತಿ ಮುಂದುವರಿಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ</strong>: ಇಲ್ಲಿನ ನೆಹರೂ ಮೈದಾನದಲ್ಲಿ ಮಾರಿಕಾಂಬಾ ಜಾತ್ರೆ ಅಂಗವಾಗಿ ಶುಕ್ರವಾರ ನಡೆದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕುಸ್ತಿ ಚಾಂಪಿಯನ್ಷಿಪ್ ಪ್ರೇಕ್ಷಕರ ಮನಸೂರೆಗೊಂಡಿತು.</p>.<p>ದೇಶದ ವಿವಿಧ ಭಾಗಗಳಿಂದ ಬಂದಿದ್ದ ಪೈಲ್ವಾನರ ಪಟ್ಟು, ಪ್ರತಿಪಟ್ಟುಗಳನ್ನು ಕಂಡು ನೋಡುಗರು ಪುಳಕಿತರಾದರು. </p>.<p>ಮಥುರಾದ ರಾಮ್ ಹಾಗೂ ಶಿಕಾರಿಪುರ ತಾಲ್ಲೂಕಿನ ಮಾಸೂರಿನ ಅಕ್ರಂ ಅವರ ನಡುವೆ 15 ನಿಮಿಷಗಳವರೆಗೆ ಜಂಗಿ ಕುಸ್ತಿ ನಡೆಯಿತು. ನಿಗದಿತ 10 ನಿಮಿಷಗಳಲ್ಲಿ ಇಬ್ಬರೂ ಸಮಬಲದ ಹೋರಾಟ ನಡೆಸಿದರು.</p>.<p>ಹೀಗಾಗಿ ಸಂಘಟಕರು ಹೆಚ್ಚುವರಿಯಾಗಿ 5 ನಿಮಿಷಗಳ ಕಾಲಾವಕಾಶ ನೀಡಿದರು. ಈ ಅವಧಿಯಲ್ಲಿ ತುರುಸಿನ ಪೈಪೋಟಿ ಕಂಡುಬಂತು. ಬಿಗಿ ಪಟ್ಟುಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ರಾಮ್, ಕುಸ್ತಿ ಇನ್ನೇನು ಮುಗಿಯಬೇಕು ಎನ್ನುವ ಹೊತ್ತಿಗೆ ಎದುರಾಳಿಯನ್ನು ಚಿತ್ ಮಾಡಿ ಸಂಭ್ರಮಿಸಿದರು.</p>.<p>ಬೆಳಗಾವಿಯ ಅಪ್ಪಾ ಸಾಹೇಬ್– ಸಾಂಗ್ಲಿಯ ಲೋಕೇಶ್ ವಿರುದ್ಧ, ಕೊಳಗಿಯ ಮಾರುತಿ– ಬ್ಯಾಡಗಿಯ ಮಂಜು ವಿರುದ್ಧ, ದಾವಣಗೆರೆಯ ಇರ್ಫಾನ್ (ಮೂಕ ಪೈಲ್ವಾನ್)– ತರೀಕೆರೆಯ ಪ್ರದೀಪ್ ವಿರುದ್ಧ, ಕಪ್ಪನಹಳ್ಳಿಯ ಸತೀಶ್– ಶಿವಮೊಗ್ಗದ ವಿನಯ್ ವಿರುದ್ಧ ಗೆಲುವು ಸಾಧಿಸಿದರು.</p>.<p>ದಾವಣಗೆರೆಯ ಮಾರುತಿ ಹಾಗೂ ಭದ್ರಾವತಿಯ ಚೆನ್ನಕಿಶೋರ ಅವರ ನಡುವೆ ನಡೆದ ಕುಸ್ತಿ ಸಮಬಲದಲ್ಲಿ ಮುಕ್ತಾಯಗೊಂಡಿತು. ಮಾಜಿ ಪೈಲ್ವಾನ್ ಕೆಂಚಪ್ಪ, ಲೋಕೇಶ್, ಬಸವರಾಜ್ ತೀರ್ಪುಗಾರರಾಗಿದ್ದರು. ಶನಿವಾರ ಮತ್ತು ಭಾನುವಾರವೂ ಕುಸ್ತಿ ಮುಂದುವರಿಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>