<p><strong>ಸಾಗರ</strong>: ಜಾತ್ರೆ, ಉತ್ಸವಗಳ ಸಂದರ್ಭ ಯಾವುದೇ ನಿರೀಕ್ಷೆ ಇಲ್ಲದೆ ನಿಸ್ವಾರ್ಥ ಮನೋಭಾವದಿಂದ ಇಲ್ಲಿನ ‘ಸ್ನೇಹಿತರು’ ಸಂಸ್ಥೆ ಅನ್ನ ದಾಸೋಹದ ಕಾಯಕದಲ್ಲಿ ತೊಡಗಿದೆ.</p>.<p>35 ವರ್ಷಗಳ ಹಿಂದೆ ಅಶೋಕ ರಸ್ತೆಯಲ್ಲಿರುವ ಗೋಪಾಲ್ ಅಂಕೋಲೇಕರ್ ಅವರ ನಿವಾಸದ ಎದುರು ಕೆಲವೇ ವ್ಯಾಪಾರಸ್ಥರು ಸೇರಿ ಜಾತ್ರೆಗೆ ಬರುವ ಭಕ್ತರಿಗೆ ಮಧ್ಯಾಹ್ನದ ಊಟ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ನಡೆದ ಈ ದಾಸೋಹ ಈಗ ವರ್ಷದಿಂದ ವರ್ಷಕ್ಕೆ ದೊಡ್ಡ ಸ್ವರೂಪ ಪಡೆದಿದೆ.</p>.<p>ಮಾರಿಕಾಂಬಾ ದೇವಸ್ಥಾನದ ಸಮೀಪವಿರುವ ಸಾಗರ್ ಹೋಟೆಲ್ ವೃತ್ತದ ಎದುರು ಇರುವ ನಗರಸಭೆ ಕಾಂಪ್ಲೆಕ್ಸ್ನ ನೆಲ ಮಹಡಿಯಲ್ಲಿ ‘ಸ್ನೇಹಿತರು’ ಸಂಸ್ಥೆಯ ಕಾರ್ಯಕರ್ತರು ಫೆ. 4ರಿಂದ ಜಾತ್ರೆಯ ಕೊನೆಯ ದಿನವಾದ 11ರವೆಗೂ ಪ್ರತಿದಿನ 5,000ದಿಂದ 6,000 ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.</p>.<p>ಮೊಸರನ್ನದ ಜೊತೆಗೆ ಬಿಸಿಬೇಳೆ ಬಾತ್ ಅಥವಾ ಪಲಾವ್, ತುಪ್ಪದ ಅನ್ನ, ಟೊಮೆಟೊ ಬಾತ್ ಸೇರಿ ಯಾವುದಾದರೂ ಒಂದು ತಿನಿಸು ಅಲ್ಲದೆ ಒಂದು ಸಿಹಿ ಪದಾರ್ಥವನ್ನು ಊಟದಲ್ಲಿ ಪೂರೈಸಲಾಗುತ್ತಿದೆ. ಜೊತೆಗೆ ಕುಡಿಯುವ ನೀರನ್ನು ವಿತರಿಸಲಾಗುತ್ತಿದೆ.</p>.<p>‘ಸ್ನೇಹಿತರು’ ಸಂಸ್ಥೆಯವರ ವಿಶೇಷತೆ ಏನೆಂದರೆ ಉಚಿತವಾಗಿ ಊಟ ಕೊಡುವ ಬಗ್ಗೆ ಯಾರದ್ದೇ ಆಗಲಿ ಫೋಟೋ ಹಾಕಿ ಎಲ್ಲಿಯೂ ಫ್ಲೆಕ್ಸ್ ಅಳವಡಿಸಿಲ್ಲ. ಯಾರು ಎಷ್ಟು ದೇಣಿಗೆ ನೀಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸದೆ ಜನರಿಗೆ ತೃಪ್ತಿಯಾಗುವಷ್ಟು ಊಟ ಬಡಿಸುವುದರಲ್ಲಿ ನೆಮ್ಮದಿ ಕಾಣುತ್ತಿದ್ದಾರೆ.</p>.<p>‘ನಮ್ಮೂರಿನ ವ್ಯಾಪಾರಸ್ಥರು, ಉದ್ಯಮಿಗಳು ಪ್ರತಿ ಜಾತ್ರೆಯಲ್ಲಿ ದಾಸೋಹ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ. ಹಣ ಕೊಡುವವರು ಎಲ್ಲಿಯೂ ತಮ್ಮ ಹೆಸರು ಬೆಳಕಿಗೆ ಬರಬೇಕು ಎಂದು ಬಯಸುವುದಿಲ್ಲ. ಇಲ್ಲಿ ಎಲ್ಲಾ ಪಕ್ಷ, ಜಾತಿ, ಧರ್ಮದವರ ನೆರವು ಇದೆ’ ಎನ್ನುತ್ತಾರೆ ಸ್ನೇಹಿತರು ಬಳಗದ ಬಿ.ಎಚ್. ಲಿಂಗರಾಜ್.</p>.<p>ಇದರ ಜೊತೆಗೆ ವೀರಶೈವ ಕಲ್ಯಾಣ ಮಂಟಪದಲ್ಲಿ ಮಾರಿಕಾಂಬಾ ದೇವಸ್ಥಾನದ ಸಮಿತಿ ವತಿಯಿಂದಲೂ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯೂ ಪ್ರತಿದಿನ 5,000ದಿಂದ 6,000 ಜನರು ದಾಸೋಹದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.</p>
<p><strong>ಸಾಗರ</strong>: ಜಾತ್ರೆ, ಉತ್ಸವಗಳ ಸಂದರ್ಭ ಯಾವುದೇ ನಿರೀಕ್ಷೆ ಇಲ್ಲದೆ ನಿಸ್ವಾರ್ಥ ಮನೋಭಾವದಿಂದ ಇಲ್ಲಿನ ‘ಸ್ನೇಹಿತರು’ ಸಂಸ್ಥೆ ಅನ್ನ ದಾಸೋಹದ ಕಾಯಕದಲ್ಲಿ ತೊಡಗಿದೆ.</p>.<p>35 ವರ್ಷಗಳ ಹಿಂದೆ ಅಶೋಕ ರಸ್ತೆಯಲ್ಲಿರುವ ಗೋಪಾಲ್ ಅಂಕೋಲೇಕರ್ ಅವರ ನಿವಾಸದ ಎದುರು ಕೆಲವೇ ವ್ಯಾಪಾರಸ್ಥರು ಸೇರಿ ಜಾತ್ರೆಗೆ ಬರುವ ಭಕ್ತರಿಗೆ ಮಧ್ಯಾಹ್ನದ ಊಟ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ನಡೆದ ಈ ದಾಸೋಹ ಈಗ ವರ್ಷದಿಂದ ವರ್ಷಕ್ಕೆ ದೊಡ್ಡ ಸ್ವರೂಪ ಪಡೆದಿದೆ.</p>.<p>ಮಾರಿಕಾಂಬಾ ದೇವಸ್ಥಾನದ ಸಮೀಪವಿರುವ ಸಾಗರ್ ಹೋಟೆಲ್ ವೃತ್ತದ ಎದುರು ಇರುವ ನಗರಸಭೆ ಕಾಂಪ್ಲೆಕ್ಸ್ನ ನೆಲ ಮಹಡಿಯಲ್ಲಿ ‘ಸ್ನೇಹಿತರು’ ಸಂಸ್ಥೆಯ ಕಾರ್ಯಕರ್ತರು ಫೆ. 4ರಿಂದ ಜಾತ್ರೆಯ ಕೊನೆಯ ದಿನವಾದ 11ರವೆಗೂ ಪ್ರತಿದಿನ 5,000ದಿಂದ 6,000 ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.</p>.<p>ಮೊಸರನ್ನದ ಜೊತೆಗೆ ಬಿಸಿಬೇಳೆ ಬಾತ್ ಅಥವಾ ಪಲಾವ್, ತುಪ್ಪದ ಅನ್ನ, ಟೊಮೆಟೊ ಬಾತ್ ಸೇರಿ ಯಾವುದಾದರೂ ಒಂದು ತಿನಿಸು ಅಲ್ಲದೆ ಒಂದು ಸಿಹಿ ಪದಾರ್ಥವನ್ನು ಊಟದಲ್ಲಿ ಪೂರೈಸಲಾಗುತ್ತಿದೆ. ಜೊತೆಗೆ ಕುಡಿಯುವ ನೀರನ್ನು ವಿತರಿಸಲಾಗುತ್ತಿದೆ.</p>.<p>‘ಸ್ನೇಹಿತರು’ ಸಂಸ್ಥೆಯವರ ವಿಶೇಷತೆ ಏನೆಂದರೆ ಉಚಿತವಾಗಿ ಊಟ ಕೊಡುವ ಬಗ್ಗೆ ಯಾರದ್ದೇ ಆಗಲಿ ಫೋಟೋ ಹಾಕಿ ಎಲ್ಲಿಯೂ ಫ್ಲೆಕ್ಸ್ ಅಳವಡಿಸಿಲ್ಲ. ಯಾರು ಎಷ್ಟು ದೇಣಿಗೆ ನೀಡಿದ್ದಾರೆ ಎಂಬುದನ್ನು ಬಹಿರಂಗ ಪಡಿಸದೆ ಜನರಿಗೆ ತೃಪ್ತಿಯಾಗುವಷ್ಟು ಊಟ ಬಡಿಸುವುದರಲ್ಲಿ ನೆಮ್ಮದಿ ಕಾಣುತ್ತಿದ್ದಾರೆ.</p>.<p>‘ನಮ್ಮೂರಿನ ವ್ಯಾಪಾರಸ್ಥರು, ಉದ್ಯಮಿಗಳು ಪ್ರತಿ ಜಾತ್ರೆಯಲ್ಲಿ ದಾಸೋಹ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ. ಹಣ ಕೊಡುವವರು ಎಲ್ಲಿಯೂ ತಮ್ಮ ಹೆಸರು ಬೆಳಕಿಗೆ ಬರಬೇಕು ಎಂದು ಬಯಸುವುದಿಲ್ಲ. ಇಲ್ಲಿ ಎಲ್ಲಾ ಪಕ್ಷ, ಜಾತಿ, ಧರ್ಮದವರ ನೆರವು ಇದೆ’ ಎನ್ನುತ್ತಾರೆ ಸ್ನೇಹಿತರು ಬಳಗದ ಬಿ.ಎಚ್. ಲಿಂಗರಾಜ್.</p>.<p>ಇದರ ಜೊತೆಗೆ ವೀರಶೈವ ಕಲ್ಯಾಣ ಮಂಟಪದಲ್ಲಿ ಮಾರಿಕಾಂಬಾ ದೇವಸ್ಥಾನದ ಸಮಿತಿ ವತಿಯಿಂದಲೂ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯೂ ಪ್ರತಿದಿನ 5,000ದಿಂದ 6,000 ಜನರು ದಾಸೋಹದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.</p>