<p><strong>ತೀರ್ಥಹಳ್ಳಿ</strong>: ‘ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಸಹಕಾರ ಸಂಘ ವಾರ್ಷಿಕ ₹1,475 ಕೋಟಿ ವ್ಯವಹಾರ ನಡೆಸಿದೆ. ಸಂಸ್ಥೆ ಒಟ್ಟು ಸ್ಥಿರಾಸ್ತಿ ₹72 ಕೋಟಿ ಹೊಂದಿದ್ದು, ಆರ್ಥಿಕವಾಗಿ ಸಬಲವಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಬಸವಾನಿ ವಿಜಯದೇವ್ ಹೇಳಿದರು.</p>.<p>ರಾಜ್ಯದಲ್ಲಿಯೇ ಅತ್ಯಧಿಕ ಮೊತ್ತದ ವಹಿವಾಟು ನಡೆಸಿದ ಸಂಸ್ಥೆಗಳಲ್ಲಿ ಸಹ್ಯಾದ್ರಿ ಸಂಸ್ಥೆಯ ಪಾಲು ದೊಡ್ಡದಿದೆ. ವಾರ್ಷಿಕ ವಿವಿಧ ವಹಿವಾಟಿನಡಿ ₹11.64 ಕೋಟಿ ಲಾಭ ಪಡೆದಿದೆ. ಅನೇಕ ಸವಾಲುಗಳ ನಡುವೆ ಸಂಘ ಬಲಿಷ್ಠವಾಗಿ ಕಟ್ಟಲಾಗುತ್ತಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.</p>.<p>ಸಂಘದಲ್ಲಿ 11,281 ಷೇರುದಾರರಿದ್ದು, ಒಟ್ಟು ₹140 ಕೋಟಿ ಸಾಲ ವಿತರಿಸಲಾಗಿದೆ. ಕಳೆದ ಸಾಲಿನಲ್ಲಿ ಶೇ 77ರಷ್ಟು ಸಾಲ ಮರುಪಾವತಿಯಾಗಿದೆ. ₹48 ಕೋಟಿ ಮೊತ್ತವನ್ನು ವಿವಿಧ ಸಂಘ– ಸಂಸ್ಥೆಗಳಲ್ಲಿ ವಿನಿಯೋಗಿಸಲಾಗಿದೆ. ಸಾರ್ವಜನಿಕ ಠೇವಣಿ ₹97 ಕೋಟಿಯಾಗಿದ್ದು ಆಡಿಟ್ ವರದಿಯಲ್ಲಿ ‘ಎ’ ಶ್ರೇಣಿಯನ್ನು ಪಡೆದಿದೆ ಎಂದರು.</p>.<p>‘ಅಡಿಕೆ ವ್ಯಾಪಾರದ ಮೂಲಕ ರೈತರ ಹಿತ ಕಾಪಾಡಲು ಆದ್ಯತೆ ನೀಡಲಾಗಿದೆ. ಅಡಿಕೆ ಮೂಟೆ ಸಂಗ್ರಹಕ್ಕೆ ಸುಸಜ್ಜಿತ ಗೋದಾಮು ನಿರ್ಮಿಸಲಾಗಿದೆ. ಗುಣಮಟ್ಟದ ಸುಣ್ಣ, ಮೈಲುತುತ್ತಾ, ರಾಳ, ಕೃಷಿ ಉಪಯೋಗಿ ಔಷಧ ಮಾರಾಟ ಮಾಡಲಾಗುತ್ತಿದೆ. ಚೀಟಿ ನಿಧಿ ವಹಿವಾಟಿನಲ್ಲಿ ₹3 ಕೋಟಿ ಲಾಭ ಹೊಂದಿದ್ದೇವೆ. ಸಹ್ಯಾದ್ರಿ ಫ್ಯೂಯೆಲ್ಸ್, ನಂದಿನಿ ಮಿಲ್ಕ್ ಪಾರ್ಲರ್, ಎಮಿಷನ್ ತಪಾಸಣೆ, ಸರ್ವೋ ಆಯಿಲ್, ವಾಟರ್ ಪ್ಲಾಂಟ್ ವ್ಯವಹಾರ ಲಾಭದಲ್ಲಿದೆ’ ಎಂದರು.</p>.<p>ಸಂಘದ ಕಾರ್ಯನಿರ್ವಾಹಕ ನಿರ್ದೇಶಕಿ ಚಂದ್ರಕಲಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೀರ್ಥಹಳ್ಳಿ</strong>: ‘ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಸಹಕಾರ ಸಂಘ ವಾರ್ಷಿಕ ₹1,475 ಕೋಟಿ ವ್ಯವಹಾರ ನಡೆಸಿದೆ. ಸಂಸ್ಥೆ ಒಟ್ಟು ಸ್ಥಿರಾಸ್ತಿ ₹72 ಕೋಟಿ ಹೊಂದಿದ್ದು, ಆರ್ಥಿಕವಾಗಿ ಸಬಲವಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಬಸವಾನಿ ವಿಜಯದೇವ್ ಹೇಳಿದರು.</p>.<p>ರಾಜ್ಯದಲ್ಲಿಯೇ ಅತ್ಯಧಿಕ ಮೊತ್ತದ ವಹಿವಾಟು ನಡೆಸಿದ ಸಂಸ್ಥೆಗಳಲ್ಲಿ ಸಹ್ಯಾದ್ರಿ ಸಂಸ್ಥೆಯ ಪಾಲು ದೊಡ್ಡದಿದೆ. ವಾರ್ಷಿಕ ವಿವಿಧ ವಹಿವಾಟಿನಡಿ ₹11.64 ಕೋಟಿ ಲಾಭ ಪಡೆದಿದೆ. ಅನೇಕ ಸವಾಲುಗಳ ನಡುವೆ ಸಂಘ ಬಲಿಷ್ಠವಾಗಿ ಕಟ್ಟಲಾಗುತ್ತಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.</p>.<p>ಸಂಘದಲ್ಲಿ 11,281 ಷೇರುದಾರರಿದ್ದು, ಒಟ್ಟು ₹140 ಕೋಟಿ ಸಾಲ ವಿತರಿಸಲಾಗಿದೆ. ಕಳೆದ ಸಾಲಿನಲ್ಲಿ ಶೇ 77ರಷ್ಟು ಸಾಲ ಮರುಪಾವತಿಯಾಗಿದೆ. ₹48 ಕೋಟಿ ಮೊತ್ತವನ್ನು ವಿವಿಧ ಸಂಘ– ಸಂಸ್ಥೆಗಳಲ್ಲಿ ವಿನಿಯೋಗಿಸಲಾಗಿದೆ. ಸಾರ್ವಜನಿಕ ಠೇವಣಿ ₹97 ಕೋಟಿಯಾಗಿದ್ದು ಆಡಿಟ್ ವರದಿಯಲ್ಲಿ ‘ಎ’ ಶ್ರೇಣಿಯನ್ನು ಪಡೆದಿದೆ ಎಂದರು.</p>.<p>‘ಅಡಿಕೆ ವ್ಯಾಪಾರದ ಮೂಲಕ ರೈತರ ಹಿತ ಕಾಪಾಡಲು ಆದ್ಯತೆ ನೀಡಲಾಗಿದೆ. ಅಡಿಕೆ ಮೂಟೆ ಸಂಗ್ರಹಕ್ಕೆ ಸುಸಜ್ಜಿತ ಗೋದಾಮು ನಿರ್ಮಿಸಲಾಗಿದೆ. ಗುಣಮಟ್ಟದ ಸುಣ್ಣ, ಮೈಲುತುತ್ತಾ, ರಾಳ, ಕೃಷಿ ಉಪಯೋಗಿ ಔಷಧ ಮಾರಾಟ ಮಾಡಲಾಗುತ್ತಿದೆ. ಚೀಟಿ ನಿಧಿ ವಹಿವಾಟಿನಲ್ಲಿ ₹3 ಕೋಟಿ ಲಾಭ ಹೊಂದಿದ್ದೇವೆ. ಸಹ್ಯಾದ್ರಿ ಫ್ಯೂಯೆಲ್ಸ್, ನಂದಿನಿ ಮಿಲ್ಕ್ ಪಾರ್ಲರ್, ಎಮಿಷನ್ ತಪಾಸಣೆ, ಸರ್ವೋ ಆಯಿಲ್, ವಾಟರ್ ಪ್ಲಾಂಟ್ ವ್ಯವಹಾರ ಲಾಭದಲ್ಲಿದೆ’ ಎಂದರು.</p>.<p>ಸಂಘದ ಕಾರ್ಯನಿರ್ವಾಹಕ ನಿರ್ದೇಶಕಿ ಚಂದ್ರಕಲಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>