<p><strong>ತೀರ್ಥಹಳ್ಳಿ:</strong> ಇಲ್ಲಿನ ಸಹ್ಯಾದ್ರಿ ಸಮೂಹ ಸಂಸ್ಥೆ ವಾರ್ಷಿಕ ₹ 1,463 ಕೋಟಿ ವ್ಯವಹಾರ ನಡೆಸಿದ್ದು, ₹ 11.82 ಕೋಟಿ ಲಾಭಗಳಿಸಿದೆ ಎಂದು ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಸ್ಥೆ ಅಧ್ಯಕ್ಷ ಬಸವಾನಿ ವಿಜಯದೇವ್ ತಿಳಿಸಿದ್ದಾರೆ.</p>.<p>‘ಸುಮಾರು ₹ 96.60 ಕೋಟಿ ಠೇವಣಿ ಹೊಂದಿದ್ದು, ಪ್ರಸ್ತುತ ಸಾಲಿನಲ್ಲಿ ₹ 140 ಕೋಟಿ ಸಾಲ ನೀಡಿದೆ. ವಸೂಲಾತಿ ಪ್ರಮಾಣ ಶೇ 76 ರಷ್ಟಿದೆ. ದೂರದೃಷ್ಟಿ, ಕಠಿಣ ನಿಲುವು, ಶಿಸ್ತುಬದ್ಧ ವ್ಯವಹಾರದಿಂದ ಸಂಸ್ಥೆ ಪ್ರತಿವರ್ಷ ಲಾಭಗಳಿಸುತ್ತಿದೆ. ಸಂಸ್ಥೆಯ ಸ್ವಾವಲಂಬನೆಗಾಗಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಬೆಲೆಬಾಳುವ ನಿವೇಶನ ಖರೀದಿಸಲಾಗಿದೆ. ವಿವಿಧ ಕಡೆಗಳಲ್ಲಿ ₹ 48 ಕೋಟಿ ವಿನಿಯೋಗಿಸಿದ್ದೇವೆ’ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.</p>.<p>ಅಡಿಕೆ ವ್ಯವಹಾರ, ಸುಣ್ಣ, ಮೈಲುತುತ್ತ, ರಾಳ, ಕೃಷಿ ಉಪಯೋಗಿ ಔಷಧಿ ವ್ಯಾಪಾರದಿಂದ ₹ 1.26 ಕೋಟಿ, ಠೇವಣಿ ಮೇಲಿನ ಬಡ್ಡಿ, ಸಾಲದ ಮೇಲಿನ ಬಡ್ಡಿಯಿಂದ ₹ 6.80 ಕೋಟಿ, ಚೀಟಿ ನಿಧಿಯಲ್ಲಿ ₹ 3.34 ಕೋಟಿ, ಸಹ್ಯಾದ್ರಿ ಪೆಟ್ರೋಲ್ ಬಂಕ್ ವ್ಯವಹಾರದಿಂದ ₹ 41.76 ಲಕ್ಷ, ನಂದಿನಿ ಪಾರ್ಲರ್ ₹6.50 ಲಕ್ಷ, ಸರ್ವೋ ಆಯಿಲ್ ವ್ಯಾಪಾರದಿಂದ ₹ 7.75 ಲಕ್ಷ, ಸಹ್ಯಾದ್ರಿ ಕುಡಿಯುವ ನೀರು ₹7.87 ಲಕ್ಷ, ಇತರೆ ವ್ಯವಹಾರದಿಂದ ₹57.97 ಲಕ್ಷ ಲಾಭ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.</p>.<p>‘ಷೇರುದಾರರ ನಿರೀಕ್ಷೆ ಮೀರಿ ಕೇವಲ 23 ವರ್ಷಗಳ ಅವಧಿಯಲ್ಲಿ ಸಂಸ್ಥೆ ಬೆಳೆದಿದೆ. ಇದಕ್ಕೆ ಸಕಾಲದಲ್ಲಿ ಸಲಹೆ, ಸೂಚನೆ ನೀಡುತ್ತಿರುವ ಸಂಸ್ಥೆಯ ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕಿ ಚಂದ್ರಕಲಾ ಹಾಗೂ ಪ್ರಾಮಾಣಿಕತೆಯಿಂದ ಸಂಸ್ಥೆ ತನ್ನದೆಂಬ ಭಾವನೆಯಿಂದ ಶ್ರಮಿಸುತ್ತಿರುವ ಸಿಬ್ಬಂದಿ ಕಾರಣ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೀರ್ಥಹಳ್ಳಿ:</strong> ಇಲ್ಲಿನ ಸಹ್ಯಾದ್ರಿ ಸಮೂಹ ಸಂಸ್ಥೆ ವಾರ್ಷಿಕ ₹ 1,463 ಕೋಟಿ ವ್ಯವಹಾರ ನಡೆಸಿದ್ದು, ₹ 11.82 ಕೋಟಿ ಲಾಭಗಳಿಸಿದೆ ಎಂದು ಸಹ್ಯಾದ್ರಿ ವಿವಿಧೋದ್ದೇಶ ಅಡಿಕೆ ಬೆಳೆಗಾರರ ಮಾರಾಟ ಸಹಕಾರ ಸಂಸ್ಥೆ ಅಧ್ಯಕ್ಷ ಬಸವಾನಿ ವಿಜಯದೇವ್ ತಿಳಿಸಿದ್ದಾರೆ.</p>.<p>‘ಸುಮಾರು ₹ 96.60 ಕೋಟಿ ಠೇವಣಿ ಹೊಂದಿದ್ದು, ಪ್ರಸ್ತುತ ಸಾಲಿನಲ್ಲಿ ₹ 140 ಕೋಟಿ ಸಾಲ ನೀಡಿದೆ. ವಸೂಲಾತಿ ಪ್ರಮಾಣ ಶೇ 76 ರಷ್ಟಿದೆ. ದೂರದೃಷ್ಟಿ, ಕಠಿಣ ನಿಲುವು, ಶಿಸ್ತುಬದ್ಧ ವ್ಯವಹಾರದಿಂದ ಸಂಸ್ಥೆ ಪ್ರತಿವರ್ಷ ಲಾಭಗಳಿಸುತ್ತಿದೆ. ಸಂಸ್ಥೆಯ ಸ್ವಾವಲಂಬನೆಗಾಗಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಬೆಲೆಬಾಳುವ ನಿವೇಶನ ಖರೀದಿಸಲಾಗಿದೆ. ವಿವಿಧ ಕಡೆಗಳಲ್ಲಿ ₹ 48 ಕೋಟಿ ವಿನಿಯೋಗಿಸಿದ್ದೇವೆ’ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.</p>.<p>ಅಡಿಕೆ ವ್ಯವಹಾರ, ಸುಣ್ಣ, ಮೈಲುತುತ್ತ, ರಾಳ, ಕೃಷಿ ಉಪಯೋಗಿ ಔಷಧಿ ವ್ಯಾಪಾರದಿಂದ ₹ 1.26 ಕೋಟಿ, ಠೇವಣಿ ಮೇಲಿನ ಬಡ್ಡಿ, ಸಾಲದ ಮೇಲಿನ ಬಡ್ಡಿಯಿಂದ ₹ 6.80 ಕೋಟಿ, ಚೀಟಿ ನಿಧಿಯಲ್ಲಿ ₹ 3.34 ಕೋಟಿ, ಸಹ್ಯಾದ್ರಿ ಪೆಟ್ರೋಲ್ ಬಂಕ್ ವ್ಯವಹಾರದಿಂದ ₹ 41.76 ಲಕ್ಷ, ನಂದಿನಿ ಪಾರ್ಲರ್ ₹6.50 ಲಕ್ಷ, ಸರ್ವೋ ಆಯಿಲ್ ವ್ಯಾಪಾರದಿಂದ ₹ 7.75 ಲಕ್ಷ, ಸಹ್ಯಾದ್ರಿ ಕುಡಿಯುವ ನೀರು ₹7.87 ಲಕ್ಷ, ಇತರೆ ವ್ಯವಹಾರದಿಂದ ₹57.97 ಲಕ್ಷ ಲಾಭ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.</p>.<p>‘ಷೇರುದಾರರ ನಿರೀಕ್ಷೆ ಮೀರಿ ಕೇವಲ 23 ವರ್ಷಗಳ ಅವಧಿಯಲ್ಲಿ ಸಂಸ್ಥೆ ಬೆಳೆದಿದೆ. ಇದಕ್ಕೆ ಸಕಾಲದಲ್ಲಿ ಸಲಹೆ, ಸೂಚನೆ ನೀಡುತ್ತಿರುವ ಸಂಸ್ಥೆಯ ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕಿ ಚಂದ್ರಕಲಾ ಹಾಗೂ ಪ್ರಾಮಾಣಿಕತೆಯಿಂದ ಸಂಸ್ಥೆ ತನ್ನದೆಂಬ ಭಾವನೆಯಿಂದ ಶ್ರಮಿಸುತ್ತಿರುವ ಸಿಬ್ಬಂದಿ ಕಾರಣ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>