ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಮಲೆನಾಡು: ಮಳೆಯ ಆರ್ಭಟಕ್ಕೆ ರಸ್ತೆಗಳಿಗೆ ತೀವ್ರ ಹಾನಿ

ವೆಂಕಟೇಶ ಜಿ.ಎಚ್‌.
Published : 26 ಆಗಸ್ಟ್ 2024, 7:16 IST
Last Updated : 26 ಆಗಸ್ಟ್ 2024, 7:16 IST
ಫಾಲೋ ಮಾಡಿ
Comments
ಕುಂಸಿಯಿಂದ ರೇಚಿಕೊಪ್ಪಕ್ಕೆ ಹೋಗುವ ಮಾರ್ಗದ ಸೇತುವೆಯು ಈ ಬಾರಿಯ ಮಳೆಯಿಂದಾಗಿ ಸಂಪೂರ್ಣ ಮುಳುಗಿಹೋಗಿದೆ
ಕುಂಸಿಯಿಂದ ರೇಚಿಕೊಪ್ಪಕ್ಕೆ ಹೋಗುವ ಮಾರ್ಗದ ಸೇತುವೆಯು ಈ ಬಾರಿಯ ಮಳೆಯಿಂದಾಗಿ ಸಂಪೂರ್ಣ ಮುಳುಗಿಹೋಗಿದೆ
ಹಾನಿಗೀಡಾದ ರಸ್ತೆಗಳ ಸಮೀಕ್ಷೆ ನಡೆಯುತ್ತಿದೆ: ಡಿ.ಸಿ
‘ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾದ ರಸ್ತೆಗಳ ಸಮೀಕ್ಷೆ ನಡೆಯುತ್ತಿದೆ. ಮಳೆ ಬರುತ್ತಿರುವುದರಿಂದ ಅದು ಮುಂದುವರಿಯಲಿದೆ’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.  ‘ಹಾನಿಗೀಡಾದ ರಸ್ತೆ ಅಭಿವೃದ್ಧಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೋಶದಿಂದ (ಎನ್‌ಡಿಆರ್‌ಎಫ್‌) ಪ್ರತಿ ಕಿ.ಮೀಗೆ ₹ 60000 ಮಾತ್ರ ಅನುದಾನ ಕೊಡುತ್ತಾರೆ. ಅದರಲ್ಲಿ ರಸ್ತೆಯ ಪುನರ್‌ನಿರ್ಮಾಣ ಆಗುವುದಿಲ್ಲ. ಬರೀ ಸಣ್ಣಪುಟ್ಟ ದುರಸ್ತಿ ಕೈಗೆತ್ತಿಕೊಳ್ಳಬಹುದು. ಹೀಗಾಗಿ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್ ವಿಭಾಗದಿಂದ ಅನುದಾನ ಪಡೆಯಲು ಹಾಗೂ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಅನುದಾನ ಪಡೆಯಲು ಮುಂದಾಗಿದ್ದೇವೆ. ಮಳೆಗಾಲ ಮುಗಿದ ನಂತರ ರಿಪೇರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT