ಕುಂಸಿಯಿಂದ ರೇಚಿಕೊಪ್ಪಕ್ಕೆ ಹೋಗುವ ಮಾರ್ಗದ ಸೇತುವೆಯು ಈ ಬಾರಿಯ ಮಳೆಯಿಂದಾಗಿ ಸಂಪೂರ್ಣ ಮುಳುಗಿಹೋಗಿದೆ
ಹಾನಿಗೀಡಾದ ರಸ್ತೆಗಳ ಸಮೀಕ್ಷೆ ನಡೆಯುತ್ತಿದೆ: ಡಿ.ಸಿ
‘ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾದ ರಸ್ತೆಗಳ ಸಮೀಕ್ಷೆ ನಡೆಯುತ್ತಿದೆ. ಮಳೆ ಬರುತ್ತಿರುವುದರಿಂದ ಅದು ಮುಂದುವರಿಯಲಿದೆ’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಹಾನಿಗೀಡಾದ ರಸ್ತೆ ಅಭಿವೃದ್ಧಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೋಶದಿಂದ (ಎನ್ಡಿಆರ್ಎಫ್) ಪ್ರತಿ ಕಿ.ಮೀಗೆ ₹ 60000 ಮಾತ್ರ ಅನುದಾನ ಕೊಡುತ್ತಾರೆ. ಅದರಲ್ಲಿ ರಸ್ತೆಯ ಪುನರ್ನಿರ್ಮಾಣ ಆಗುವುದಿಲ್ಲ. ಬರೀ ಸಣ್ಣಪುಟ್ಟ ದುರಸ್ತಿ ಕೈಗೆತ್ತಿಕೊಳ್ಳಬಹುದು. ಹೀಗಾಗಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದಿಂದ ಅನುದಾನ ಪಡೆಯಲು ಹಾಗೂ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಅನುದಾನ ಪಡೆಯಲು ಮುಂದಾಗಿದ್ದೇವೆ. ಮಳೆಗಾಲ ಮುಗಿದ ನಂತರ ರಿಪೇರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸಿದರು.