<p><strong>ರಿಪ್ಪನ್ಪೇಟೆ</strong>: ಬಾಲ್ಯದಲ್ಲಿಯೇ ವೇದಾಧ್ಯಯನ ಪರಾಂಗತರಾಗಿ ಹಿಂದೂ ಧರ್ಮ ಬೋಧನೆಗಾಗಿ ವಿಶ್ವ ಪರ್ಯಟನೆ ಮಾಡಿದ ಶಂಕರಾಚಾರ್ಯರ ಧರ್ಮ ಬೋಧನೆ ಸರ್ವಕಾಲಕ್ಕೂ ಪ್ರಸ್ತುತವಾಗಿದೆ ಎಂದು ವಿದ್ವಾನ್ ಹಂಸಗಾರ ಭಾಸ್ಕರ ಶರ್ಮ ಅಭಿಪ್ರಾಯಪಟ್ಟರು.</p>.<p>ಹೊಂಬುಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ಹಿನ್ನೆಲೆಯ ನಾಗರಹಳ್ಳಿ ನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತ್ಯುತ್ಸವ ಹಾಗೂ ನಾಗೇಂದ್ರ ಸ್ವಾಮಿಯ 14ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಪರಮೇಶ್ವರನ ಪ್ರತಿರೂಪವಾಗಿ ಶಂಕರಾಚಾರ್ಯರ ಧಾರ್ಮಿಕ ಚಿಂತನೆಗಳು ಮನುಕುಲದ ಏಳಿಗೆಗೆ ಪೂರಕವಾಗಿವೆ. ಸಮಷ್ಠಿ ಭಾವದಿಂದ ಗ್ರಾಮ ದೇವರುಗಳ ಆರಾಧನೆಯಲ್ಲಿ ತೊಡಗಿ, ಸತ್ಯ, ಸಂಯಮ, ಸದ್ಭಾವ, ಸಾಧನೆ, ಸಾಕ್ಷಾತ್ಕಾರ, ಸರ್ವ ಸಿದ್ಧಿ ಮೂಲಕ ಮೋಕ್ಷ ಮಾರ್ಗ ಕಂಡುಕೊಳ್ಳಬೇಕು’ ಎಂದು ಹೇಳಿದರು.</p>.<p>ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳು ವಿದ್ವಾನ್ ಹಂಸಗಾರ ಭಾಸ್ಕರ ಶರ್ಮ ಅವರ ಮಾರ್ಗದರ್ಶನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಕಿರಣ್ ಭಟ್ ಹಾಗೂ ಪುರೋಹಿತ ಬಳಗದವರಿಂದ ನೆರವೇರಿದವು.</p>.<p>ನಾಗರಹಳ್ಳಿ ದೇವಸ್ಥಾನದ ಮಹಾದ್ವಾರ ಕಲಶಸ್ಥಾಪನೆ ಮತ್ತು ದೇವಸ್ಥಾನದಲ್ಲಿ ಕ್ಷೇತ್ರಪಾಲನ ಪ್ರತಿಷ್ಠಾಪನೆ ಕಾರ್ಯ ನಡೆದವು.</p>.<p>ದಾನಿಗಳಾದ ರವಿ, ಕಾರಕ್ಕಿ ಗಣೇಶ ಕುಟುಂಬ ವರ್ಗ, ಕಾಗೆಮರಡು ಮಂಜಣ್ಣ ಕುಟುಂಬ ವರ್ಗದವರನ್ನು ದೇವಸ್ಥಾನ ಸೇವಾ ಸಮಿತಿಯಿಂದ ಸನ್ಮಾನಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಿಪ್ಪನ್ಪೇಟೆ</strong>: ಬಾಲ್ಯದಲ್ಲಿಯೇ ವೇದಾಧ್ಯಯನ ಪರಾಂಗತರಾಗಿ ಹಿಂದೂ ಧರ್ಮ ಬೋಧನೆಗಾಗಿ ವಿಶ್ವ ಪರ್ಯಟನೆ ಮಾಡಿದ ಶಂಕರಾಚಾರ್ಯರ ಧರ್ಮ ಬೋಧನೆ ಸರ್ವಕಾಲಕ್ಕೂ ಪ್ರಸ್ತುತವಾಗಿದೆ ಎಂದು ವಿದ್ವಾನ್ ಹಂಸಗಾರ ಭಾಸ್ಕರ ಶರ್ಮ ಅಭಿಪ್ರಾಯಪಟ್ಟರು.</p>.<p>ಹೊಂಬುಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ಹಿನ್ನೆಲೆಯ ನಾಗರಹಳ್ಳಿ ನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತ್ಯುತ್ಸವ ಹಾಗೂ ನಾಗೇಂದ್ರ ಸ್ವಾಮಿಯ 14ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಪರಮೇಶ್ವರನ ಪ್ರತಿರೂಪವಾಗಿ ಶಂಕರಾಚಾರ್ಯರ ಧಾರ್ಮಿಕ ಚಿಂತನೆಗಳು ಮನುಕುಲದ ಏಳಿಗೆಗೆ ಪೂರಕವಾಗಿವೆ. ಸಮಷ್ಠಿ ಭಾವದಿಂದ ಗ್ರಾಮ ದೇವರುಗಳ ಆರಾಧನೆಯಲ್ಲಿ ತೊಡಗಿ, ಸತ್ಯ, ಸಂಯಮ, ಸದ್ಭಾವ, ಸಾಧನೆ, ಸಾಕ್ಷಾತ್ಕಾರ, ಸರ್ವ ಸಿದ್ಧಿ ಮೂಲಕ ಮೋಕ್ಷ ಮಾರ್ಗ ಕಂಡುಕೊಳ್ಳಬೇಕು’ ಎಂದು ಹೇಳಿದರು.</p>.<p>ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳು ವಿದ್ವಾನ್ ಹಂಸಗಾರ ಭಾಸ್ಕರ ಶರ್ಮ ಅವರ ಮಾರ್ಗದರ್ಶನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಕಿರಣ್ ಭಟ್ ಹಾಗೂ ಪುರೋಹಿತ ಬಳಗದವರಿಂದ ನೆರವೇರಿದವು.</p>.<p>ನಾಗರಹಳ್ಳಿ ದೇವಸ್ಥಾನದ ಮಹಾದ್ವಾರ ಕಲಶಸ್ಥಾಪನೆ ಮತ್ತು ದೇವಸ್ಥಾನದಲ್ಲಿ ಕ್ಷೇತ್ರಪಾಲನ ಪ್ರತಿಷ್ಠಾಪನೆ ಕಾರ್ಯ ನಡೆದವು.</p>.<p>ದಾನಿಗಳಾದ ರವಿ, ಕಾರಕ್ಕಿ ಗಣೇಶ ಕುಟುಂಬ ವರ್ಗ, ಕಾಗೆಮರಡು ಮಂಜಣ್ಣ ಕುಟುಂಬ ವರ್ಗದವರನ್ನು ದೇವಸ್ಥಾನ ಸೇವಾ ಸಮಿತಿಯಿಂದ ಸನ್ಮಾನಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>