ಶಂಕರಾಚಾರ್ಯ, ಶಾರದಾಂಬ, ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಕುಂಭಾಭೀಷೇಕ ಮಹೋತ್ಸವ ಅಂದು ನಡೆಯಲಿವೆ ಎಂದು ಶಂಕರ ಮಠದ ಧರ್ಮಾಧಿಕಾರಿ ಡಾ.ಪಿ.ನಾರಾಯಣ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೇ 22ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಸಂಜೆ 5ಕ್ಕೆ ವಿಧುಶೇಖರ ಭಾರತಿ ಸ್ವಾಮೀಜಿ ಆಗಮನ, ಶ್ರೀಗಳ ಶೋಭಾ ಯಾತ್ರೆ, ಭಾರತೀ ತೀರ್ಥ ಭವನದ ಉದ್ಘಾಟನೆ, ಶ್ರೀಗಳವರಿಗೆ ಧೂಳಿ ಪಾದಪೂಜೆ, ಫಲಪುಷ್ಪ ಸಮರ್ಪಣೆ, ಆಶೀರ್ವಚನ ಇರುತ್ತದೆ. ರಾತ್ರಿ 8.30ಕ್ಕೆ ಶ್ರೀಗಳಿಂದ ಚಂದ್ರಮೌಳೇಶ್ವರ ಪೂಜೆ ನೆರವೇರಲಿದೆ ಎಂದು ವಿವರ ನೀಡಿದರು.