ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಕರ್ನಾಟಕ ವಿದ್ಯುತ್ ನಿಗಮದ ವಿರುದ್ಧ ಆಕ್ರೋಶ

Published : 16 ಸೆಪ್ಟೆಂಬರ್ 2025, 20:02 IST
Last Updated : 16 ಸೆಪ್ಟೆಂಬರ್ 2025, 20:02 IST
ಫಾಲೋ ಮಾಡಿ
Comments
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಅನುಷ್ಠಾನ ತಡೆಯುವ ಅಧಿಕಾರ ನನಗೆ ಇಲ್ಲ. ಆದರೆ ಜನಾಭಿಪ್ರಾಯ ಆಕ್ಷೇಪಣೆಗಳನ್ನು ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಕಳಿಸಿಕೊಡುವೆ
– ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ ಶಿವಮೊಗ್ಗ
ರೂಢಿಗತ ಹೆಸರಿಗೆ ಆಗ್ರಹ; ಸಭೆಯಲ್ಲಿ ಗದ್ದಲ
ಪಿಪಿಟಿ ಪ್ರದರ್ಶನದ ವೇಳೆ ಕೆಪಿಸಿ ಅಧಿಕಾರಿಗಳು ಯೋಜನಾ ಬಾಧಿತ ಪ್ರದೇಶದಲ್ಲಿರುವ ಸಸ್ತನಿ ಸರೀಸೃಪ ಹಾಗೂ ಜಲಚರಗಳಿಗೆ ಸ್ಥಳೀಯವಾಗಿ ರೂಢಿಗತ ಹೆಸರು ಉಲ್ಲೇಖಿಸದೇ ವೈಜ್ಞಾನಿಕ ಹೆಸರನ್ನು ಬಳಸಿದ್ದು ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು. ಜಿಲ್ಲಾಧಿಕಾರಿ ಸೂಚನೆಯ ನಂತರ ರೂಢಿಗತ ಹೆಸರನ್ನು ಉಲ್ಲೇಖಿಸಿ ಕೆಪಿಸಿ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಅಹವಾಲು ಸಭೆಯಲ್ಲಿ ಆನ್‌ಲೈನ್‌ ಮೂಲಕ 14090 ಹಾಗೂ ಲಿಖಿತವಾಗಿ 800ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾದವು.
ಮುಂದೆ ನಮಗೆ ಜಾಗವಿರುವುದಿಲ್ಲವೇನೊ?
‘ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ವ್ಯಾಪ್ತಿಯ ಪ್ರದೇಶದಲ್ಲಿ ನೆಲೆಸಿರುವವರಲ್ಲಿ ಹಕ್ಕುಪತ್ರ ಇರುವವರಿಗೆ ಪರಿಹಾರ ಕೊಡಲಾಗುವುದು ಎಂದು ಕೆಪಿಸಿಯವರು ಹೇಳುತ್ತಿದ್ದಾರೆ. ಅಜ್ಜ ಮುತ್ತಜ್ಜನ ಕಾಲದಿಂದಲೂ ಅರಣ್ಯ ಪ್ರದೇಶದಲ್ಲಿ ವಾಸವಿದ್ದೇವೆ. ಶರಾವತಿ ಕಣಿವೆ ವ್ಯಾಪ್ತಿಯ ಹೆನ್ನಿ ಅಂಜಕ್ಕಿ ಸುಂಕಮನೆ ಹರಕುಣೆ ಮರಾಠಿಕೇರಿ ಹಾರೆಕ್ಕೆ ಸುತ್ತಲೂ ವಾಸವಿರುವ ನಮ್ಮಂತೆಯೇ ನೂರಾರು ಮಂದಿಗೆ ಮನೆ ಜಾಗಕ್ಕೆ ಹಕ್ಕುಪತ್ರ ಇಲ್ಲ. ಭವಿಷ್ಯ ಏನು? ಮುಂದೆ ನಮಗೆ ಜಾಗವಿರುವುದಿಲ್ಲವೇನೋ ಎಂಬ ಅಂಜಿಕೆ ಈಗಲೇ ಕಾಡುತ್ತಿದೆ’ ಎಂದು ಸಾಗರ ತಾಲ್ಲೂಕಿನ ಹೆನ್ನಿಯ ದುರುಗಪ್ಪ ಹಾಗೂ ಹಾರೆಕ್ಕೆಯ ತಿಮ್ಮಪ್ಪ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT