ತಡರಾತ್ರಿ ಬೇರೆ ಪಟ್ಟಣಗಳಿಂದ ಶಿಕಾರಿಪುರಕ್ಕೆ ಬರಲು ಹಾಗೂ ಶಿಕಾರಿಪುರದಿಂದ ಹೊನ್ನಾಳಿ, ಮಾಸೂರು, ಸಾಗರ, ಶಿರಾಳಕೊಪ್ಪ, ಶಿವಮೊಗ್ಗ ಸೇರಿ ಗ್ರಾಮಾಂತರ ಪ್ರದೇಶಕ್ಕೆ ತೆರಳಲು ಸಮರ್ಪಕವಾಗಿ ಬಸ್ ಸಂಪರ್ಕವಿಲ್ಲ. ಆದರೆ ಕೆಎಸ್ಆರ್ಟಿಸಿ ಬಸ್ ಡಿಪೊ ನಿರ್ಮಾಣವಾದರೆ ಬಸ್ಗಳ ಸಂಚಾರ ಸಮರ್ಪಕವಾಗಿ ಆಗಲಿದೆ ಎಂಬ ನಿರೀಕ್ಷೆಯನ್ನು ತಾಲ್ಲೂಕಿನ ಜನತೆ ಹೊಂದಿದ್ದಾರೆ.