ತಡರಾತ್ರಿ ನಕಲಿ ಕೀ ಬಳಸಿ ಜೆಸಿಬಿ ಚಲಾಯಿಸಿಕೊಂಡು ಎಟಿಎಂ ಕೇಂದ್ರದ ಎದುರು ಬಂದಿರುವ ವ್ಯಕ್ತಿ ಎಟಿಎಂ ಯಂತ್ರವನ್ನು ಜೆಸಿಬಿ ಸಹಾಯದಿಂದ ಹೊರಗೆಳೆಯಲು ಮುಂದಾಗಿದ್ದಾನೆ. ಇದೇ ವೇಳೆ ರಾತ್ರಿ ಗಸ್ತಿನಲ್ಲಿದ್ದ ಸಂಚಾರ ಠಾಣೆ ಇನ್ಸ್ಪೆಕ್ಟರ್ ಸಂತೋಷ ಕುಮಾರ್, ತಡರಾತ್ರಿಯಲ್ಲಿ ಎಟಿಎಂ ಕೇಂದ್ರದ ಎದುರು ಜೆಸಿಬಿ ಕಾರ್ಯಾಚರಣೆ ನಡೆಸುತ್ತಿರುವುದನ್ನು ಕಂಡು ಅನುಮಾನ ಬಂದು ಸ್ಥಳಕ್ಕೆ ಬಂದಿದ್ದಾರೆ. ಪೊಲೀಸ್ ವಾಹನ ಬರುತ್ತಿದ್ದಂತೆಯೇ ಜೆಸಿಬಿಯಲ್ಲಿದ್ದ ವ್ಯಕ್ತಿ ಇಳಿದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ದುಷ್ಕರ್ಮಿಯು ಜೆಸಿಬಿ ಬಳಸಿ ಎಟಿಎಂ ಯಂತ್ರ ತೆರೆಯಲು ಮುಂದಾಗಿದ್ದರಿಂದ ಅದರ ಮೇಲಿನ ಭಾಗ ಜಖಂಗೊಂಡಿದೆ. ಗಾಜಿನ ಬಾಗಿಲು ಒಡೆದುಹೋಗಿದೆ.
ಎಟಿಎಂ ಕೇಂದ್ರಕ್ಕೆ ಕಾವಲುಗಾರ ಇರಲಿಲ್ಲ ಹಾಗೂ ಅದರಲ್ಲಿ ಹಣ ಇರಲಿಲ್ಲ ಎನ್ನಲಾಗಿದೆ.