ಕರಾವಳಿ, ಮಲೆನಾಡಿನ ಇಳಿಜಾರು ಪ್ರದೇಶಗಳು, ಗುಡ್ಡ ನದಿ ಕಣಿವೆ ಪ್ರದೇಶಗಳಲ್ಲಿ ಗೇರು ಸಸಿಗಳನ್ನು ನೆಟ್ಟು ಪೋಷಿಸಲಾಗಿತ್ತು. ಹೊನ್ನಾವರ ತಾಲ್ಲೂಕಿನ ಕರಿಕಾನ ಪರಮೇಶ್ವರಿ ಬೆಟ್ಟ, ಶರಾವತಿ ನದಿ ಕಣಿವೆಯ ಖಾರ್ವಾ ಬೆಟ್ಟ, ಸಿದ್ದಾಪುರದ ಅಘನಾಶಿನಿ ಕಣಿವೆ, ಹೊಸನಗರ ತಾಲ್ಲೂಕಿನ ಹನಿಯಾ ಗುಡ್ಡ, ಕುಂದಾಪುರದ ವರಾಹಿ ಪ್ರದೇಶಗಳಲ್ಲಿ ನೆಡುತೋಪುಗಳು ಹರಡಿಕೊಂಡಿವೆ.