ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ತಾಲ್ಲೂಕು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮ ಬಂದಿತ್ತು. ಅಖಾಡದಲ್ಲಿ ಪುನೀತ್ ರಾಜ್ಕುಮಾರ್, ಪವರ್ ಸ್ಟಾರ್, ಹಿರೇಕಸವಿ ಹಂತಕ, ಕುಂಬತ್ತಿ ಕೂಸು ಡಾನ್, ಕೆಪಿಆರ್ ಕಿಂಗ್, ಮಾವಲಿ ಗೌಡ್ರು ಮಗ, ಹುಲಿಬಾಯ್, ಕೆಡಿಎಂ ಕಿಂಗ್, ಮದಗಜ, ಚಿನ್ನಾಟದ ನಂದಿ, ಗೂಳಿ, ಕದಂಬ, ತಾರಕಾಸುರ, ಕಬಡ್ಡಿ ಕಿಂಗ್, ಜನನಾಯಕ, ಕಸ್ತೂರಿ, ಶ್ರೀರಾಮ, ಜನಮೆಚ್ಚಿದ ಮಗ, ಬಸವ, ಜಮೀನ್ದಾರ, ಗರುಡ, ಅಭಿಮನ್ಯು ಸೇರಿ ವಿವಿಧ ಹೆಸರುಗಳ ಹೋರಿಗಳು ಇದ್ದವು.