ಬೆಳಿಗ್ಗೆ ರವೀಂದ್ರನಗರ, ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸಾವಿರಾರು ಅಭಿಮಾನಿ ಬಳಗದ ಜೊತೆಗೆ ತೆರೆದ ವಾಹನದಲ್ಲಿ ಮಹಾವೀರ ವೃತ್ತದವರೆಗೆ ಮೆರವಣಿಗೆ ನಡೆಸಿ, ಮಧ್ಯಾಹ್ನ 12.30ಕ್ಕೆ ಉಮೇದುವಾರಿಕೆ ಸಲ್ಲಿಸಿದರು. ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎಂ. ಶ್ರೀಕಾಂತ್, ಆಯನೂರು ಶಿವನಾಯ್ಕ್, ನಾಗರಾಜ ಕಂಕಾರಿ ಇದ್ದರು.