<p>ರಿ.ರಾ. ರವಿಶಂಕರ್</p>.<p>ರಿಪ್ಪನ್ಪೇಟೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಹೊಸ ಕನಸುಗಳನ್ನು ಕಟ್ಟಿದ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮೂರು ತಿಂಗಳುಗಳಿಂದ ಕಂಪ್ಯೂಟರ್ ಸೈನ್ಸ್ (ಗಣಕ ವಿಜ್ಞಾನ ) ವಿಭಾಗಕ್ಕೆ ಪ್ರಾಧ್ಯಾಪಕರಿಲ್ಲದೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಂಕು ಕವಿದಂತಾಗಿದೆ.</p>.<p>ಶಿವಮೊಗ್ಗ, ಸಾಗರದಂತಹ ಪಟ್ಟಣದಲ್ಲಿ ವ್ಯಾಸಂಗ ಮಾಡಲು ಸಾಧ್ಯವಾಗದೆ, ಉನ್ನತ ಶಿಕ್ಷಣಕ್ಕೆ ತಿಲಾಂಜಲಿ ನೀಡಲು ಹೊರಟವರಿಗೆ ದಾರಿ ತೋರಿದ್ದು ರಿಪ್ಪನ್ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು.</p>.<p>ಬದುಕಿನಲ್ಲಿ ಹೊಸ ಆಶಯಗಳನ್ನು ಹೊತ್ತು ಸಾಗಿದ ವಿದ್ಯಾರ್ಥಿಗಳನ್ನು ತನ್ನಡೆಗೆ ಸೆಳದದ್ದು ₹ 1.5 ಕೋಟಿ ವೆಚ್ಚದ ನೂತನ ಕಟ್ಟಡದಲ್ಲಿ ತಲೆ ಎತ್ತಿ ನಿಂತ ವಿಜ್ಞಾನ ವಿಭಾಗ. ಆದರೆ, ಇಲ್ಲಿ ಒಳ ಹೋದ ವಿದ್ಯಾರ್ಥಿಗಳಿಗೆ ತಿಳಿದ ಸತ್ಯ ಸಂಗತಿ ರಾಸಾಯನಿಕ ವಿಜ್ಞಾನಕ್ಕೆ ಪೂರ್ಣಕಾಲಿಕ ಉಪನ್ಯಾಸಕರಿಲ್ಲ ಎಂಬುದು. ಗಣಕಯಂತ್ರ ವಿಭಾಗಕ್ಕೆ ಪ್ರಾಧ್ಯಾಪಕರು ಇದ್ದರೂ 6 ತಿಂಗಳುಗಳಿಂದ ಮಾತೃತ್ವ ರಜೆಯಲ್ಲಿದ್ದಾರೆ. ಡಿಸೆಂಬರ್ 10ರಿಂದ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗಣಕ ವಿಜ್ಞಾನ ತರಗತಿಗಳನ್ನು ಬಹಿಷ್ಕರಿಸಿದ್ದಾರೆ.</p>.<p>ಪರಿಣಾಮವಾಗಿ ಇಲ್ಲಿನ ಗಣಕ ವಿಜ್ಞಾನ ವಿಭಾಗದ ಪ್ರಥಮ ವಿಭಾಗದ 20, ದ್ವೀತಿಯ ವಿಭಾಗದ 15 ಹಾಗೂ ತೃತೀಯ ವಿಭಾಗದ 16 ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.</p>.<p>‘ಸರ್ಕಾರ, ಕಾಲೇಜು ಅಭಿವೃದ್ಧಿ ಸಮಿತಿ, ಸ್ಥಳೀಯರು, ಪ್ರಾಂಶುಪಾಲರು ಯಾರಾದರೂ ನಮ್ಮ ಗೋಳನ್ನು ಆಲಿಸಲಿ. ಆಗಲಾದರೂ ನಮ್ಮ ಕನಸುಗಳು ಸಾಕಾರಗೊಳ್ಳಬಹುದು’ ಎಂಬ ನಿರೀಕ್ಷೆಯಲ್ಲಿದ್ದಾರೆ ವಿದ್ಯಾರ್ಥಿನಿಯರಾದ ನೆವಟೂರಿನ ಅಮೃತಾ, ನಿಕಿತಾ, ಅಲುವಳ್ಳಿಯ ಸ್ವಾತಿ.</p>.<p>‘ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ ಮಕ್ಕಳ ಪಾಡು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ತಕ್ಷಣವೇ ಸಿಡಿಸಿ ಅನುದಾನದಲ್ಲಿ ಗಣಕ ವಿಜ್ಞಾನದ ಉಪನ್ಯಾಸಕರ ನೇಮಕಕ್ಕೆ ಕಾಲೇಜಿನ ಆಡಳಿತ ಮಂಡಳಿ ಕ್ರಮ ಕೈಗೊಳ್ಳಲಿ’ ಎಂದು ಪೋಷಕರು ಒತ್ತಾಯಿಸಿದ್ದಾರೆ.</p>.<p class="Briefhead">***</p>.<p>ಪರೀಕ್ಷೆ ಸಮೀಪಿಸುತ್ತಿದೆ. ಅದರೆ, ಪಠ್ಯ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಗೊಂದಲಕ್ಕೊಳಗಾಗಿದ್ದೇನೆ.<br />ದರ್ಶನ್, ದ್ವಿತೀಯ ಪದವಿ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿ</p>.<p>ರಜೆಯಲ್ಲಿರುವ ಪ್ರಾಧ್ಯಾಪಕರು ನಮ್ಮ ಅನುಮಾನಗಳಿಗೆ ಸ್ಪಂದಿಸಿ ನೋಟ್ಸ್ ಕಳುಹಿಸುತ್ತಿದ್ದಾರೆ. ಆದರೂ ಪೂರ್ಣ ಪ್ರಮಾಣದ ಪಾಠ ಪ್ರವಚನಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು.<br />ಮೇಘರಾಜ್, ಹೊಂಬುಜ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಿ.ರಾ. ರವಿಶಂಕರ್</p>.<p>ರಿಪ್ಪನ್ಪೇಟೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಹೊಸ ಕನಸುಗಳನ್ನು ಕಟ್ಟಿದ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮೂರು ತಿಂಗಳುಗಳಿಂದ ಕಂಪ್ಯೂಟರ್ ಸೈನ್ಸ್ (ಗಣಕ ವಿಜ್ಞಾನ ) ವಿಭಾಗಕ್ಕೆ ಪ್ರಾಧ್ಯಾಪಕರಿಲ್ಲದೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಂಕು ಕವಿದಂತಾಗಿದೆ.</p>.<p>ಶಿವಮೊಗ್ಗ, ಸಾಗರದಂತಹ ಪಟ್ಟಣದಲ್ಲಿ ವ್ಯಾಸಂಗ ಮಾಡಲು ಸಾಧ್ಯವಾಗದೆ, ಉನ್ನತ ಶಿಕ್ಷಣಕ್ಕೆ ತಿಲಾಂಜಲಿ ನೀಡಲು ಹೊರಟವರಿಗೆ ದಾರಿ ತೋರಿದ್ದು ರಿಪ್ಪನ್ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು.</p>.<p>ಬದುಕಿನಲ್ಲಿ ಹೊಸ ಆಶಯಗಳನ್ನು ಹೊತ್ತು ಸಾಗಿದ ವಿದ್ಯಾರ್ಥಿಗಳನ್ನು ತನ್ನಡೆಗೆ ಸೆಳದದ್ದು ₹ 1.5 ಕೋಟಿ ವೆಚ್ಚದ ನೂತನ ಕಟ್ಟಡದಲ್ಲಿ ತಲೆ ಎತ್ತಿ ನಿಂತ ವಿಜ್ಞಾನ ವಿಭಾಗ. ಆದರೆ, ಇಲ್ಲಿ ಒಳ ಹೋದ ವಿದ್ಯಾರ್ಥಿಗಳಿಗೆ ತಿಳಿದ ಸತ್ಯ ಸಂಗತಿ ರಾಸಾಯನಿಕ ವಿಜ್ಞಾನಕ್ಕೆ ಪೂರ್ಣಕಾಲಿಕ ಉಪನ್ಯಾಸಕರಿಲ್ಲ ಎಂಬುದು. ಗಣಕಯಂತ್ರ ವಿಭಾಗಕ್ಕೆ ಪ್ರಾಧ್ಯಾಪಕರು ಇದ್ದರೂ 6 ತಿಂಗಳುಗಳಿಂದ ಮಾತೃತ್ವ ರಜೆಯಲ್ಲಿದ್ದಾರೆ. ಡಿಸೆಂಬರ್ 10ರಿಂದ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗಣಕ ವಿಜ್ಞಾನ ತರಗತಿಗಳನ್ನು ಬಹಿಷ್ಕರಿಸಿದ್ದಾರೆ.</p>.<p>ಪರಿಣಾಮವಾಗಿ ಇಲ್ಲಿನ ಗಣಕ ವಿಜ್ಞಾನ ವಿಭಾಗದ ಪ್ರಥಮ ವಿಭಾಗದ 20, ದ್ವೀತಿಯ ವಿಭಾಗದ 15 ಹಾಗೂ ತೃತೀಯ ವಿಭಾಗದ 16 ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.</p>.<p>‘ಸರ್ಕಾರ, ಕಾಲೇಜು ಅಭಿವೃದ್ಧಿ ಸಮಿತಿ, ಸ್ಥಳೀಯರು, ಪ್ರಾಂಶುಪಾಲರು ಯಾರಾದರೂ ನಮ್ಮ ಗೋಳನ್ನು ಆಲಿಸಲಿ. ಆಗಲಾದರೂ ನಮ್ಮ ಕನಸುಗಳು ಸಾಕಾರಗೊಳ್ಳಬಹುದು’ ಎಂಬ ನಿರೀಕ್ಷೆಯಲ್ಲಿದ್ದಾರೆ ವಿದ್ಯಾರ್ಥಿನಿಯರಾದ ನೆವಟೂರಿನ ಅಮೃತಾ, ನಿಕಿತಾ, ಅಲುವಳ್ಳಿಯ ಸ್ವಾತಿ.</p>.<p>‘ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ ಮಕ್ಕಳ ಪಾಡು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ತಕ್ಷಣವೇ ಸಿಡಿಸಿ ಅನುದಾನದಲ್ಲಿ ಗಣಕ ವಿಜ್ಞಾನದ ಉಪನ್ಯಾಸಕರ ನೇಮಕಕ್ಕೆ ಕಾಲೇಜಿನ ಆಡಳಿತ ಮಂಡಳಿ ಕ್ರಮ ಕೈಗೊಳ್ಳಲಿ’ ಎಂದು ಪೋಷಕರು ಒತ್ತಾಯಿಸಿದ್ದಾರೆ.</p>.<p class="Briefhead">***</p>.<p>ಪರೀಕ್ಷೆ ಸಮೀಪಿಸುತ್ತಿದೆ. ಅದರೆ, ಪಠ್ಯ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಗೊಂದಲಕ್ಕೊಳಗಾಗಿದ್ದೇನೆ.<br />ದರ್ಶನ್, ದ್ವಿತೀಯ ಪದವಿ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿ</p>.<p>ರಜೆಯಲ್ಲಿರುವ ಪ್ರಾಧ್ಯಾಪಕರು ನಮ್ಮ ಅನುಮಾನಗಳಿಗೆ ಸ್ಪಂದಿಸಿ ನೋಟ್ಸ್ ಕಳುಹಿಸುತ್ತಿದ್ದಾರೆ. ಆದರೂ ಪೂರ್ಣ ಪ್ರಮಾಣದ ಪಾಠ ಪ್ರವಚನಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು.<br />ಮೇಘರಾಜ್, ಹೊಂಬುಜ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>