<p><strong>ಕುಂಸಿ: ‘</strong>ಈ ಮಳೆಗಾಲಕ್ಕೆ ಎಲ್ಲಿ ಶೆಡ್ ಬಿದ್ದು ಹೋಗುವುದೋ, ಬದುಕಿಗೆ ಆಸರೆಯಾಗಿದ್ದ ಹೋಟೆಲ್ ಬಂದ್ ಆಗುವುದೋ’ ಎಂಬ ಆತಂಕದಲ್ಲಿದ್ದ ಇಲ್ಲಿನ ಹಳೇಕುಂಸಿಯ ವೃದ್ಧೆಯರಾದ ಸುಶೀಲಮ್ಮ ಹಾಗೂ ರತ್ನಮ್ಮ ಅವರ ಮುಖದಲ್ಲಿ ಈಗ ನೆಮ್ಮದಿಯ ಭಾವ ಮೂಡಿದೆ.</p>.<p>ಹಳೇಕುಂಸಿಯ ಪೊಲೀಸ್ ಠಾಣೆಯ ಪಕ್ಕದಲ್ಲಿ ಈ ಇಬ್ಬರೂ ಅಜ್ಜಿಯರು ಒಟ್ಟಾಗಿ 15 ವರ್ಷಗಳಿಂದ ಸಣ್ಣ<br />ತಗಡಿನ ಶೆಡ್ನಲ್ಲಿ ಹೋಟೆಲ್ ನಡೆಸುತ್ತಿದ್ದರು. ಆದು ಬಹುತೇಕ ಹಾಳಾಗಿತ್ತು. ಇನ್ನೇನು ಈ ಮಳೆಗಾಲದಲ್ಲಿ ಶೆಡ್ ಬಿದ್ದು ಹೋಗುತ್ತದೆ ಎಂಬ ಆತಂಕ ಮನೆ ಮಾಡಿತ್ತು. ಇದನ್ನು ಅರಿತ ಕುಂಸಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್<br />ಹಾಗೂ ಸಿಬ್ಬಂದಿ ಹೋಟೆಲನ್ನು ನವೀಕರಿಸಿದ್ದಾರೆ. ಅವರ ಈ ಮಾನವೀಯ ಕಾರ್ಯ ಸುತ್ತಲಿನ ಜನರ ಪ್ರಶಂಸೆಗೆ ಪಾತ್ರವಾಗಿದೆ.</p>.<p class="Subhead">ಅನ್ನಪೂರ್ಣೆಯರು: ಇಲ್ಲಿನ ಪೊಲೀಸರ ಪಾಲಿಗೂ ಈ ಅಜ್ಜಿಯು ಅನ್ನಪೂರ್ಣೆಯರು. ಈ ಪುಟ್ಟ ಹೋಟೆಲ್ ಅವರ ಹೊಟ್ಟೆ ತುಂಬಿಸುವ ಮನೆಯೆ ಹೌದು. ತಿಂಡಿಗೆ, ಊಟಕ್ಕೆ ಬರುವವರನ್ನು ತಮ್ಮ ಮಕ್ಕಳಂತೆಯೆ ಆತ್ಮೀಯತೆಯಿಂದ ಕಾಣುವ ಪರಿ ಪೊಲೀಸರಿಗೂ ಅಚ್ಚುಮೆಚ್ಚು.</p>.<p>ಈ ಇಬ್ಬರು ಅಜ್ಜಿಯರಿಗೂ ಒಬ್ಬರೆ ಪತಿ. ಅವರು ಕೂಡ<br />ಎರಡು ವರ್ಷದ ಹಿಂದೆ ತೀರಿ ಹೋಗಿದ್ದಾರೆ. ಇದ್ದೊಬ್ಬ ಮಗ, ಮಗಳು ತೀರಿ ಹೋಗಿದ್ದಾರೆ. ಹೀಗಾಗಿ ಯಾರು ಇಲ್ಲದ ಅಜ್ಜಿಯರಿಗೆ ಈ<br />ಹೋಟೆಲ್ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ. ಯಾರಿಗೂ ಹೊರೆಯಾಗದೆ ಈ ಅಜ್ಜಿಯರು ಜೀವನ ನಡೆಸುತ್ತಿದ್ದಾರೆ.</p>.<p>ಇವರ ಪರಿಸ್ಥಿತಿ ಮನಗಂಡ ಕುಂಸಿ ಠಾಣೆಯ ಇನ್ಸ್ ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್ ಹಾಗೂ ಸಿಬ್ಬಂದಿ ತಮ್ಮ ಕೈಲಾದಷ್ಟು ಹಣ ಹಾಕಿ ಹೋಟೆಲ್ನ ಮೇಲ್ಛಾವಣಿ ಬದಲಾಯಿಸಿ, ಶೆಡ್ನ ಸ್ಥಿತಿಗತಿ ಬದಲಾಯಿಸಿದ್ದಾರೆ.</p>.<p>ತಮ್ಮ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಮಾನವೀಯತೆ ತೋರಿರುವ ಕುಂಸಿ ಠಾಣೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಂಸಿ: ‘</strong>ಈ ಮಳೆಗಾಲಕ್ಕೆ ಎಲ್ಲಿ ಶೆಡ್ ಬಿದ್ದು ಹೋಗುವುದೋ, ಬದುಕಿಗೆ ಆಸರೆಯಾಗಿದ್ದ ಹೋಟೆಲ್ ಬಂದ್ ಆಗುವುದೋ’ ಎಂಬ ಆತಂಕದಲ್ಲಿದ್ದ ಇಲ್ಲಿನ ಹಳೇಕುಂಸಿಯ ವೃದ್ಧೆಯರಾದ ಸುಶೀಲಮ್ಮ ಹಾಗೂ ರತ್ನಮ್ಮ ಅವರ ಮುಖದಲ್ಲಿ ಈಗ ನೆಮ್ಮದಿಯ ಭಾವ ಮೂಡಿದೆ.</p>.<p>ಹಳೇಕುಂಸಿಯ ಪೊಲೀಸ್ ಠಾಣೆಯ ಪಕ್ಕದಲ್ಲಿ ಈ ಇಬ್ಬರೂ ಅಜ್ಜಿಯರು ಒಟ್ಟಾಗಿ 15 ವರ್ಷಗಳಿಂದ ಸಣ್ಣ<br />ತಗಡಿನ ಶೆಡ್ನಲ್ಲಿ ಹೋಟೆಲ್ ನಡೆಸುತ್ತಿದ್ದರು. ಆದು ಬಹುತೇಕ ಹಾಳಾಗಿತ್ತು. ಇನ್ನೇನು ಈ ಮಳೆಗಾಲದಲ್ಲಿ ಶೆಡ್ ಬಿದ್ದು ಹೋಗುತ್ತದೆ ಎಂಬ ಆತಂಕ ಮನೆ ಮಾಡಿತ್ತು. ಇದನ್ನು ಅರಿತ ಕುಂಸಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅಭಯ್ ಪ್ರಕಾಶ್<br />ಹಾಗೂ ಸಿಬ್ಬಂದಿ ಹೋಟೆಲನ್ನು ನವೀಕರಿಸಿದ್ದಾರೆ. ಅವರ ಈ ಮಾನವೀಯ ಕಾರ್ಯ ಸುತ್ತಲಿನ ಜನರ ಪ್ರಶಂಸೆಗೆ ಪಾತ್ರವಾಗಿದೆ.</p>.<p class="Subhead">ಅನ್ನಪೂರ್ಣೆಯರು: ಇಲ್ಲಿನ ಪೊಲೀಸರ ಪಾಲಿಗೂ ಈ ಅಜ್ಜಿಯು ಅನ್ನಪೂರ್ಣೆಯರು. ಈ ಪುಟ್ಟ ಹೋಟೆಲ್ ಅವರ ಹೊಟ್ಟೆ ತುಂಬಿಸುವ ಮನೆಯೆ ಹೌದು. ತಿಂಡಿಗೆ, ಊಟಕ್ಕೆ ಬರುವವರನ್ನು ತಮ್ಮ ಮಕ್ಕಳಂತೆಯೆ ಆತ್ಮೀಯತೆಯಿಂದ ಕಾಣುವ ಪರಿ ಪೊಲೀಸರಿಗೂ ಅಚ್ಚುಮೆಚ್ಚು.</p>.<p>ಈ ಇಬ್ಬರು ಅಜ್ಜಿಯರಿಗೂ ಒಬ್ಬರೆ ಪತಿ. ಅವರು ಕೂಡ<br />ಎರಡು ವರ್ಷದ ಹಿಂದೆ ತೀರಿ ಹೋಗಿದ್ದಾರೆ. ಇದ್ದೊಬ್ಬ ಮಗ, ಮಗಳು ತೀರಿ ಹೋಗಿದ್ದಾರೆ. ಹೀಗಾಗಿ ಯಾರು ಇಲ್ಲದ ಅಜ್ಜಿಯರಿಗೆ ಈ<br />ಹೋಟೆಲ್ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ. ಯಾರಿಗೂ ಹೊರೆಯಾಗದೆ ಈ ಅಜ್ಜಿಯರು ಜೀವನ ನಡೆಸುತ್ತಿದ್ದಾರೆ.</p>.<p>ಇವರ ಪರಿಸ್ಥಿತಿ ಮನಗಂಡ ಕುಂಸಿ ಠಾಣೆಯ ಇನ್ಸ್ ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್ ಹಾಗೂ ಸಿಬ್ಬಂದಿ ತಮ್ಮ ಕೈಲಾದಷ್ಟು ಹಣ ಹಾಕಿ ಹೋಟೆಲ್ನ ಮೇಲ್ಛಾವಣಿ ಬದಲಾಯಿಸಿ, ಶೆಡ್ನ ಸ್ಥಿತಿಗತಿ ಬದಲಾಯಿಸಿದ್ದಾರೆ.</p>.<p>ತಮ್ಮ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಮಾನವೀಯತೆ ತೋರಿರುವ ಕುಂಸಿ ಠಾಣೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>