ಅಮಲಲ್ಲಿರುತ್ತಾರೆ ಪ್ರಶ್ನಿಸಿದರೆ ಹೊಡೆಯುತ್ತಾರೆ..
‘ಊರಲ್ಲಿರುವ ಕೆಲವು ಮಕ್ಕಳಲ್ಲಿ ಗಾಂಜಾ ಪಂಕ್ಚರ್ ಹಾಕಲು ಬಳಸುವ ಸಲ್ಯೂಶನ್ ಸೇವಿಸುವ ಚಟ ವಿಪರೀತವಾಗಿದೆ. ಎದೆ ಎತ್ತರಕ್ಕೆ ಬೆಳೆದ ಮಕ್ಕಳು ಮಾತು ಕೇಳುತ್ತಿಲ್ಲ. ಶಾಲೆ ಬಿಟ್ಟು ಅಲೆಯುತ್ತಾರೆ. ಕೆಲಸಕ್ಕೂ ಹೋಗುವುದಿಲ್ಲ. ಸದಾ ಅಮಲಿನಲ್ಲಿರುತ್ತಾರೆ. ಪ್ರಶ್ನೆ ಮಾಡಿದರೆ ನಮಗೇ ಹೊಡೆಯುತ್ತಾರೆ’ ಎಂದು ಊರಗಡೂರಿನ ಜಹೀರಾಬಿ ಅಳಲು ತೋಡಿಕೊಂಡರು. ‘ಓಣಿಯಲ್ಲಿ ಗಾಂಜಾ ಮಾರುವವರ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ಸಂಜೆಯೇ ದೂರು ಕೊಟ್ಟವರ ಮನೆಗೆ ದಂಧೆಕೋರರ ಗುಂಪು ಮಚ್ಚು ಹಿಡಿದು ಬರುತ್ತದೆ. ಬೆದರಿಕೆ ಹಾಕಿ ಮನೆ ಎದುರು ನಿಲ್ಲಿಸಿದ ವಾಹನದ ಗಾಜು ಒಡೆದು ಹಾಕುತ್ತಾರೆ. ದೂರು ಕೊಟ್ಟವರ ಮಾಹಿತಿಯನ್ನು ಪೊಲೀಸರೇ ಅವರಿಗೆ ಕೊಡುತ್ತಾರೆ. ಯಾರ ಬಳಿ ನಮ್ಮ ಸಂಕಷ್ಟ ಹೇಳಿಕೊಳ್ಳುವುದು?’ ಎಂದು ಆಕೆ ಪ್ರಶ್ನಿಸಿದರು.