ಕೇತುಗ್ರಸ್ಥ ಗ್ರಹಣದ ಅವಧಿಯಲ್ಲಿ ಬಹುತೇಕ ಅಂಗಡಿ, ಹೋಟೆಲ್ ಮತ್ತು ದೇವಸ್ಥಾನ ಬಂದ್ ಆಗಿದ್ದವು. ಹೀಗಾಗಿ ಹಬ್ಬದ ಸಂಭ್ರಮಕ್ಕೆ ಕೆಲ ಹೊತ್ತು ಮಂಕು ಕವಿದಿತ್ತು. ಬಹಳಷ್ಟು ಕಡೆ ಹೋಟೆಲ್, ಬೇಕರಿಗಳನ್ನೂ ಸಹ ಬಂದ್ ಮಾಡಲಾಗಿದೆ. ಸಂಜೆ ಸುಮಾರು 5.12 ಕ್ಕೆ ಹಿಡಿದ ಗ್ರಹಣ ಸರಿಸುಮಾರು ಒಂದು ಗಂಟೆಯವರೆಗೆ ಹಿಡಿದಿತ್ತು. ಅದರ ಹಿನ್ನಲೆಯಲ್ಲಿ ಬಹುತೇಕ ಅಂಗಡಿ ಗಳು ಬಂದ್ ಆಗಿದ್ದವು. ಚಿತ್ರಮಂದಿರಗಳು ಸಹ ಬಂದ್ ಆಗಿದ್ದವು. ಗ್ರಹಣ ಮುಗಿದ ನಂತರ ಇಲ್ಲಿನ ದುರ್ಗಿಗುಡಿಯ ಶನೇಶ್ವರ ದೇವಸ್ಥಾನದಲ್ಲಿ ಗ್ರಹಣ ಶಾಂತಿ ಹೋಮ ನಡೆಯಿತು.