<p>ಭದ್ರಾವತಿ: ‘ವಚನ ಚಳವಳಿ ಐತಿಹಾಸಿಕ ಹಿನ್ನೆಲೆಗೆ ಸೀಮಿತವಲ್ಲ. ವಾಸ್ತವ ಬದುಕಿಗೂ ಸಾಮೀಪ್ಯ ಹೊಂದಿದೆ’ ಎಂದು ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಉಪನ್ಯಾಸಕಿ ಪ್ರೊ.ಶುಭಾ ಮರವಂತೆ ಹೇಳಿದರು.</p>.<p>ತಾಲ್ಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜ ಶುಕ್ರವಾರ ಆಯೋಜಿಸಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಬದುಕಿನ ವಾಸ್ತವ ತೆರೆದಿಡುವ ವಚನಕಾರರ ಚಿಂತನೆಗೆ ಕಳಶವಿಟ್ಟ ರೀತಿಯಲ್ಲಿ ಅಕ್ಕಮಹಾದೇವಿ ಬದುಕು ಸಹ ಅಧ್ಯಾತ್ಮ ಚಿಂತನೆಯ ತಳಹದಿಯ ಮೇಲೆ ನಿಂತಿದೆ’ ಎಂದರು.</p>.<p>‘ಅಂದಿನ ಸಾಂಸಾರಿಕ ಬದುಕಿನ ಬವಣೆಗಳ ಚಿತ್ರಣವನ್ನು ನಾವು ವಿಮುಕ್ತಿ ಮನೋಭಾವದಿಂದ ಕಾಣದೆ ಅದನ್ನು ನಮ್ಮೊಳಗಿನ ಅಂತರ್ಮುಖಿ ಚಿಂತನೆಯಾಗಿ ಬೆಳೆಸಿಕೊಳ್ಳಬೇಕು.ಅಂದಿನ ಸಾಮಾಜಿಕ ವಾತಾವರಣದ ಪರಿಸ್ಥಿತಿಯಲ್ಲೂ ಅಕ್ಕಮಹಾದೇವಿ ಕೇಶಾಧಾರವನ್ನೇ ತನ್ನ ಆಭರಣ ಮಾಡಿಕೊಂಡು 650 ಕಿ.ಮೀ. ಸಂಚರಿಸಿದ್ದು ದೊಡ್ಡ ಸಾಹಸವೇ ಸರಿ. ಆ ಮೂಲಕ ವೈಚಾರಿಕ ಕ್ರಾಂತಿಯ ವಾಸ್ತವ ಚಿತ್ರಣ ತೆರೆದಿಟ್ಟಅಕ್ಕನ ಚಿಂತನೆ ಇಂದಿಗೂ ಪ್ರಸ್ತುತ’ ಎಂದು ಹೇಳಿದರು.</p>.<p>ಮುಖ್ಯ ಅತಿಥಿ ಬಿ.ಎಸ್.ರೂಪಾರಾವ್, ‘ಅಕ್ಕನ ಚಿಂತನೆಗಳು ಅಂದಿನ ಮಹಿಳಾ ಸ್ಥಿತಿಗತಿಗಳ ಅವಲೋಕನ ತಿಳಿಸುವ ಜತೆಗೆ ಭವಿಷ್ಯದಲ್ಲಿ ಇದನ್ನು ಅಳವಡಿಸಿಕೊಂಡು ಬದುಕು ನಡೆಸುವ ವಾಸ್ತವ ಸಾರಿದೆ’ ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಆರ್.ಎಸ್. ಶೋಭಾ ಮಾತನಾಡಿ, ‘ಅಕ್ಕನ ವಚನಗಳ ಸಾರವನ್ನು ಅರಿತು ಬಾಳ್ವೆ ನಡೆಸುವ ಮನಃಸ್ಥಿತಿ ಎಲ್ಲರಲ್ಲೂ ಬೆಳೆಯಬೇಕು’ಎಂದರು.</p>.<p>ಗೌರಮ್ಮ ಶಂಕ್ರಯ್ಯ, ಸುಶೀಲಾ ಸದಾಶಿವಪ್ಪ, ಮಮತಪ್ರಕಾಶ್ ಇದ್ದರು. ಯಶೋದ, ನಾಗರತ್ನ, ಗೌರಮ್ಮ ಪ್ರಾರ್ಥಿಸಿದರು, ಕುಸುಮಾ ತೀರ್ಥಯ್ಯ ನಿರೂಪಿಸಿದರು. ಮಧುಮಿತ ಪರಮೇಶ್ವರಪ್ಪ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭದ್ರಾವತಿ: ‘ವಚನ ಚಳವಳಿ ಐತಿಹಾಸಿಕ ಹಿನ್ನೆಲೆಗೆ ಸೀಮಿತವಲ್ಲ. ವಾಸ್ತವ ಬದುಕಿಗೂ ಸಾಮೀಪ್ಯ ಹೊಂದಿದೆ’ ಎಂದು ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಉಪನ್ಯಾಸಕಿ ಪ್ರೊ.ಶುಭಾ ಮರವಂತೆ ಹೇಳಿದರು.</p>.<p>ತಾಲ್ಲೂಕು ವೀರಶೈವ ಲಿಂಗಾಯತ ಮಹಿಳಾ ಸಮಾಜ ಶುಕ್ರವಾರ ಆಯೋಜಿಸಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಬದುಕಿನ ವಾಸ್ತವ ತೆರೆದಿಡುವ ವಚನಕಾರರ ಚಿಂತನೆಗೆ ಕಳಶವಿಟ್ಟ ರೀತಿಯಲ್ಲಿ ಅಕ್ಕಮಹಾದೇವಿ ಬದುಕು ಸಹ ಅಧ್ಯಾತ್ಮ ಚಿಂತನೆಯ ತಳಹದಿಯ ಮೇಲೆ ನಿಂತಿದೆ’ ಎಂದರು.</p>.<p>‘ಅಂದಿನ ಸಾಂಸಾರಿಕ ಬದುಕಿನ ಬವಣೆಗಳ ಚಿತ್ರಣವನ್ನು ನಾವು ವಿಮುಕ್ತಿ ಮನೋಭಾವದಿಂದ ಕಾಣದೆ ಅದನ್ನು ನಮ್ಮೊಳಗಿನ ಅಂತರ್ಮುಖಿ ಚಿಂತನೆಯಾಗಿ ಬೆಳೆಸಿಕೊಳ್ಳಬೇಕು.ಅಂದಿನ ಸಾಮಾಜಿಕ ವಾತಾವರಣದ ಪರಿಸ್ಥಿತಿಯಲ್ಲೂ ಅಕ್ಕಮಹಾದೇವಿ ಕೇಶಾಧಾರವನ್ನೇ ತನ್ನ ಆಭರಣ ಮಾಡಿಕೊಂಡು 650 ಕಿ.ಮೀ. ಸಂಚರಿಸಿದ್ದು ದೊಡ್ಡ ಸಾಹಸವೇ ಸರಿ. ಆ ಮೂಲಕ ವೈಚಾರಿಕ ಕ್ರಾಂತಿಯ ವಾಸ್ತವ ಚಿತ್ರಣ ತೆರೆದಿಟ್ಟಅಕ್ಕನ ಚಿಂತನೆ ಇಂದಿಗೂ ಪ್ರಸ್ತುತ’ ಎಂದು ಹೇಳಿದರು.</p>.<p>ಮುಖ್ಯ ಅತಿಥಿ ಬಿ.ಎಸ್.ರೂಪಾರಾವ್, ‘ಅಕ್ಕನ ಚಿಂತನೆಗಳು ಅಂದಿನ ಮಹಿಳಾ ಸ್ಥಿತಿಗತಿಗಳ ಅವಲೋಕನ ತಿಳಿಸುವ ಜತೆಗೆ ಭವಿಷ್ಯದಲ್ಲಿ ಇದನ್ನು ಅಳವಡಿಸಿಕೊಂಡು ಬದುಕು ನಡೆಸುವ ವಾಸ್ತವ ಸಾರಿದೆ’ ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಆರ್.ಎಸ್. ಶೋಭಾ ಮಾತನಾಡಿ, ‘ಅಕ್ಕನ ವಚನಗಳ ಸಾರವನ್ನು ಅರಿತು ಬಾಳ್ವೆ ನಡೆಸುವ ಮನಃಸ್ಥಿತಿ ಎಲ್ಲರಲ್ಲೂ ಬೆಳೆಯಬೇಕು’ಎಂದರು.</p>.<p>ಗೌರಮ್ಮ ಶಂಕ್ರಯ್ಯ, ಸುಶೀಲಾ ಸದಾಶಿವಪ್ಪ, ಮಮತಪ್ರಕಾಶ್ ಇದ್ದರು. ಯಶೋದ, ನಾಗರತ್ನ, ಗೌರಮ್ಮ ಪ್ರಾರ್ಥಿಸಿದರು, ಕುಸುಮಾ ತೀರ್ಥಯ್ಯ ನಿರೂಪಿಸಿದರು. ಮಧುಮಿತ ಪರಮೇಶ್ವರಪ್ಪ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>