<p><strong>ತೀರ್ಥಹಳ್ಳಿ</strong>: ‘ಸೌಹಾರ್ದ ಕೆಣಕಿದರೆ ಸಮಾಜದ ಶಾಂತಿ ಹಾಳಾಗುತ್ತದೆ. ಪ್ರೀತಿ, ವಿಶ್ವಾಸ ಮರೆತು ಪರಸ್ಪರ ಕಿತ್ತಾಟ ನಡೆಸಿದರೆ ಮಾನಸಿಕ ನೆಮ್ಮದಿ ಹಾಳಾಗುತ್ತದೆ’ ಎಂದು ನಿಯೋಜಿತ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಜೆ.ಕೆ.ರಮೇಶ್ ಅಭಿಪ್ರಾಯಪಟ್ಟರು.</p>.<p>ಬುಧವಾರ ವರ್ತಕರ ಸೌಹಾರ್ದ ಸಹಕಾರಿ ಸಂಘ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ವ್ಯಕ್ತಿಯಿಂದ ವ್ಯಕ್ತಿಗೆ ಅಭಿಪ್ರಾಯಗಳು ವಿಭಿನ್ನವಾಗಿರುತ್ತವೆ. ಒಬ್ಬರ ಸಂಸ್ಕೃತಿ, ಸಂಸ್ಕಾರ, ಅಸಮಾಧಾನ ಗುರುತಿಸಿ ಟೀಕಿಸುವ ಬದಲು ಭಾಗವಹಿಸದೆ ಪ್ರತಿಭಟಿಸುವ ತಾಳ್ಮೆ ಇರಬೇಕು. ಸಂಘರ್ಷಕ್ಕಿಳಿದರೆ ಅಶಾಂತಿ ಸೃಷ್ಟಿಯಾಗುತ್ತದೆ’ ಎಂದು ತಿಳಿಸಿದರು.</p>.<p>‘ಹೃದಯ ಪರಿಶುದ್ಧವಾಗಿದ್ದರೆ ಮನಸ್ಸಿನ ಆಲೋಚನೆ ಸೃಜನಶೀಲವಾಗಿರುತ್ತದೆ. ಸಾಹಿತ್ಯ ಓದುಗ ಮತ್ತು ಕರ್ತೃ ನಡುವೆ ಭಿನ್ನತೆ ಇದ್ದರೆ ಸಾಹಿತ್ಯ ವ್ಯಾಖ್ಯಾನ ಅರ್ಥವಾಗದು. ಸಮಾನ ಮನಸ್ಕರಾಗಿದ್ದರೆ ಮಾತ್ರ ಒಳಾರ್ಥ ಬಿಡಿಸಬಹುದು’ ಎಂದರು.</p>.<p>‘ಜೆ.ಕೆ.ರಮೇಶ್ ಯಾವತ್ತೂ ಪ್ರಚಾರ ಬಯಸದ ವ್ಯಕ್ತಿ. ತಪ್ಪುಗಳಿಗೆ ತಮ್ಮ ಸೌಮ್ಯ ಸ್ವಾಭಾವದ ಮೂಲಕವೇ ಕಠೋರವಾಗಿ ಟೀಕಿಸುವ ಗುಣವನ್ನು ರೂಪಿಸಿಕೊಂಡಿದ್ದಾರೆ’ ಎಂದು ಸಂಘದ ಅಧ್ಯಕ್ಷ ಡಾನ್ ರಾಮಣ್ಣ ಹೇಳಿದರು.</p>.<p>ಸಂಘದ ನಿರ್ದೇಶಕ ಸೊಪ್ಪುಗುಡ್ಡೆ ರಾಘವೇಂದ್ರ ಮಾತನಾಡಿದರು. ಚೈತನ್ಯ ಜವಳಿ, ರಾಘವೇಂದ್ರ ಮಲ್ಯ, ಸಹನಾ ಭಟ್, ಯುವರಾಜ್ ಕೈಮರ, ಬಳಗಟ್ಟೆ ಗಿರೀಶ್, ಮಹಮ್ಮದ್ ಶಫಿ, ರಾಘವೇಂದ್ರ ಶೆಣೈ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೀರ್ಥಹಳ್ಳಿ</strong>: ‘ಸೌಹಾರ್ದ ಕೆಣಕಿದರೆ ಸಮಾಜದ ಶಾಂತಿ ಹಾಳಾಗುತ್ತದೆ. ಪ್ರೀತಿ, ವಿಶ್ವಾಸ ಮರೆತು ಪರಸ್ಪರ ಕಿತ್ತಾಟ ನಡೆಸಿದರೆ ಮಾನಸಿಕ ನೆಮ್ಮದಿ ಹಾಳಾಗುತ್ತದೆ’ ಎಂದು ನಿಯೋಜಿತ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಜೆ.ಕೆ.ರಮೇಶ್ ಅಭಿಪ್ರಾಯಪಟ್ಟರು.</p>.<p>ಬುಧವಾರ ವರ್ತಕರ ಸೌಹಾರ್ದ ಸಹಕಾರಿ ಸಂಘ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ವ್ಯಕ್ತಿಯಿಂದ ವ್ಯಕ್ತಿಗೆ ಅಭಿಪ್ರಾಯಗಳು ವಿಭಿನ್ನವಾಗಿರುತ್ತವೆ. ಒಬ್ಬರ ಸಂಸ್ಕೃತಿ, ಸಂಸ್ಕಾರ, ಅಸಮಾಧಾನ ಗುರುತಿಸಿ ಟೀಕಿಸುವ ಬದಲು ಭಾಗವಹಿಸದೆ ಪ್ರತಿಭಟಿಸುವ ತಾಳ್ಮೆ ಇರಬೇಕು. ಸಂಘರ್ಷಕ್ಕಿಳಿದರೆ ಅಶಾಂತಿ ಸೃಷ್ಟಿಯಾಗುತ್ತದೆ’ ಎಂದು ತಿಳಿಸಿದರು.</p>.<p>‘ಹೃದಯ ಪರಿಶುದ್ಧವಾಗಿದ್ದರೆ ಮನಸ್ಸಿನ ಆಲೋಚನೆ ಸೃಜನಶೀಲವಾಗಿರುತ್ತದೆ. ಸಾಹಿತ್ಯ ಓದುಗ ಮತ್ತು ಕರ್ತೃ ನಡುವೆ ಭಿನ್ನತೆ ಇದ್ದರೆ ಸಾಹಿತ್ಯ ವ್ಯಾಖ್ಯಾನ ಅರ್ಥವಾಗದು. ಸಮಾನ ಮನಸ್ಕರಾಗಿದ್ದರೆ ಮಾತ್ರ ಒಳಾರ್ಥ ಬಿಡಿಸಬಹುದು’ ಎಂದರು.</p>.<p>‘ಜೆ.ಕೆ.ರಮೇಶ್ ಯಾವತ್ತೂ ಪ್ರಚಾರ ಬಯಸದ ವ್ಯಕ್ತಿ. ತಪ್ಪುಗಳಿಗೆ ತಮ್ಮ ಸೌಮ್ಯ ಸ್ವಾಭಾವದ ಮೂಲಕವೇ ಕಠೋರವಾಗಿ ಟೀಕಿಸುವ ಗುಣವನ್ನು ರೂಪಿಸಿಕೊಂಡಿದ್ದಾರೆ’ ಎಂದು ಸಂಘದ ಅಧ್ಯಕ್ಷ ಡಾನ್ ರಾಮಣ್ಣ ಹೇಳಿದರು.</p>.<p>ಸಂಘದ ನಿರ್ದೇಶಕ ಸೊಪ್ಪುಗುಡ್ಡೆ ರಾಘವೇಂದ್ರ ಮಾತನಾಡಿದರು. ಚೈತನ್ಯ ಜವಳಿ, ರಾಘವೇಂದ್ರ ಮಲ್ಯ, ಸಹನಾ ಭಟ್, ಯುವರಾಜ್ ಕೈಮರ, ಬಳಗಟ್ಟೆ ಗಿರೀಶ್, ಮಹಮ್ಮದ್ ಶಫಿ, ರಾಘವೇಂದ್ರ ಶೆಣೈ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>