ಯಾರೋ ಒಬ್ಬ ರಾಜ ಇಷ್ಟವಿಲ್ಲ ಎಂದ ತಕ್ಷಣ ಇತಿಹಾಸ ಅಳಿಸಲು ಸಾಧ್ಯವಿಲ್ಲ. ಹೈದರಾಲಿ, ಟಿಪ್ಪು ಆಡಳಿತ ಕಾಲಘಟ್ಟ. ಟಿಪ್ಪುವಿನ ಇತಿಹಾಸ. ಮೂರನೇ ಮತ್ತು ನಾಲ್ಕನೇ ಆಂಗ್ಲೊ–ಮೈಸೂರು ಕದನ, ಬ್ರಿಟಿಷರ ವಿರುದ್ಧದ ಹೋರಾಟ, ರಾಕೆಟ್ ತಂತ್ರಜ್ಞಾನದ ಪರಿಚಯ. 1799ರಲ್ಲಿ ಅವರು ಹೊಂದಿದ ವೀರ ಮರಣ. ನಂಜನಗೂಡು ದೇವಸ್ಥಾನ, ಶೃಂಗೇರಿ ಸೇರಿದಂತೆ ಹಿಂದೂಗಳ ದೇವಸ್ಥಾನ, ಮಠಗಳಿಗೆ ಅವರು ನೀಡಿದ ನೆರವು ಮರೆ ಮಾಚಲು ಸಾಧ್ಯವೇ ಎಂದು ಪ್ರಸನ್ನಕುಮಾರ್ ಪ್ರಶ್ನಿಸಿದ್ದಾರೆ.
ರಾವಣ ಕೆಟ್ಟವನು ಎನ್ನುವ ಕಾರಣಕ್ಕೆ ರಾಮಾಯಣದ ಭಾಗದಿಂದ ರಾವಣನ ಪಾತ್ರವನ್ನು, ದುರ್ಯೋಧನ, ದುಶ್ಯಾಸನರು ದುಷ್ಟರು ಎನ್ನುವ ಕಾರಣಕ್ಕೆ ಅವರ ಪಾತ್ರಗಳನ್ನು ಅಳಿಸಿಹಾಕಿ ರಾಮಾಯಣ, ಮಹಾಭಾರತ ಕಥೆ ಓದಿಸಲು ಸಾಧ್ಯವೇ ಎಂದು ವ್ಯಂಗ್ಯವಾಡಿದ್ದಾರೆ.