ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 ಭೀತಿಯಿಂದ ಕೊಡಚಾದ್ರಿ, ಹಿಂಡ್ಲುಮನೆ ಚಾರಣ ರದ್ದುಗೊಳಿಸಿ ಆದೇಶ

Last Updated 17 ಮಾರ್ಚ್ 2020, 12:08 IST
ಅಕ್ಷರ ಗಾತ್ರ

ಹೊಸನಗರ: ನಿಸರ್ಗ ರಮಣೀಯ ಪ್ರದೇಶವಾದ ಕೊಡಚಾದ್ರಿ ಗಿರಿ ಶಿಖರ ಮತ್ತು ಹಿಂಡ್ಲುಮನೆ ಜಲಪಾತದ ಚಾರಣವನ್ನು ರದ್ದುಗೊಳಿಸಿ ಇಲ್ಲಿನ ಕೊಲ್ಲೂರು ವನ್ಯಜೀವಿ ವಲಯ ಆದೇಶ ನೀಡಿದೆ.

ಇಲ್ಲಿನ ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಗಿರಿಶಿಖರ ಕೊಡಚಾದ್ರಿ ಮತ್ತು ಹಿಂಡ್ಲುಮನೆ ಜಲಪಾತ ಪ್ರವಾಸಿ ತಾಣಗಳಿಗೆ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾರ್ಚ್‌ 17ರಿಂದ ಜಾರಿಗೆ ಬರುವಂತೆ ಚಾರಣ ಮತ್ತು ಪ್ರವಾಸ ರದ್ದುಗೊಳಿಸಿ ಆದೇಶ ನೀಡಲಾಗಿದೆ. ಇಲಾಖೆಯಿಂದ ಮುಂದಿನ ಆದೇಶ ಬರುವವರೆಗೆ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಕೊಲ್ಲೂರು ವನ್ಯ ಜೀವಿ ವಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರವಾಸಿಗರ ಸಂಖ್ಯೆ ಇಳಿಕೆ: ಬೇಸಿಗೆ ಆರಂಭದ ಈ ದಿನಗಳಲ್ಲಿ ಕೊಡಚಾದ್ರಿ ಮತ್ತು ಹಿಂಡ್ಲುಮನೆ ಪ್ರವಾಸಿ ತಾಣಗಳ ಚಾರಣ ಹಾಗೂ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಪ್ರದೇಶಗಳಿಗೆ ಪ್ರವಾಸ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಆದರೆ ಕೊರೊನಾ ವೈರಸ್ ಭೀತಿಯಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಅದರಲ್ಲೂ ಬೆಂಗಳೂರು–ಮೈಸೂರು ಕಡೆಗಳಿಂದ ಬರುವ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT