<p><strong>ಶಿವಮೊಗ್ಗ:</strong> ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ಕೊಪ್ಪಳ ಜಿಲ್ಲೆಯ ಕಿಷ್ಕಿಂದೆವರೆಗೂ ತುಂಗಾಭದ್ರಾ ನದಿಗಳ ಶುದ್ಧತೆ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹೊನ್ನಾಳಿಯ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳನ್ನು ಬುಧವಾರ ಶಿವಮೊಗ್ಗದ ನಿರ್ಮಲಾ ತುಂಗಾ-ಭದ್ರಾ ಅಭಿಯಾನದ ತಂಡ ಭೇಟಿ ಮಾಡಿತು.</p>.<p>ಇತ್ತೀಚಿನ ದಿನಗಳಲ್ಲಿ ತುಂಗಾ-ಭದ್ರಾ ನದಿಗಳು ಅತ್ಯಂತ ಕಲುಷಿತವಾಗುತ್ತಿವೆ. ಕುಡಿಯಲು ಯೋಗ್ಯವಲ್ಲದ ದುಸ್ಥಿತಿಗೆ ತಲುಪಿವೆ. ಆದ್ದರಿಂದ ನದಿಯನ್ನು ಪಾವಿತ್ರ್ಯತೆ ಕಾಪಾಡುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಪರಿಸರ ತಂಡಗಳು ಹಾಗೂ ನಿರ್ಮಲ ತುಂಗಾ-ಭದ್ರಾ ಅಭಿಯಾನವು ಹಮ್ಮಿಕೊಂಡ ಜಾಗೃತಿ ಕುರಿತು ಶ್ರೀಗಳಿಗೆ ವಿಷಯ ತಿಳಿಸಲಾಯಿತು. </p>.<p>ಈ ವೇಳೆ ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹಾಗೂ ನಿರ್ಮಲ ತುಂಗ ಭದ್ರಾ ಅಭಿಯಾನ ತಂಡದ ಪ್ರಮುಖರಾದ ಪ್ರೊ.ಬಿ.ಎಂ.ಕುಮಾರಸ್ವಾಮಿ, ಪ್ರೊ. ಎಲ್. ಕೆ. ಶ್ರೀಪತಿ, ಬಾಲಕೃಷ್ಣ ನಾಯ್ಡು, ಮಾಜಿ ನಗರಸಭಾ ಸದಸ್ಯರಾದ ಶಂಕರ್, ಹಾಲೇಶಪ್ಪ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ಕೊಪ್ಪಳ ಜಿಲ್ಲೆಯ ಕಿಷ್ಕಿಂದೆವರೆಗೂ ತುಂಗಾಭದ್ರಾ ನದಿಗಳ ಶುದ್ಧತೆ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹೊನ್ನಾಳಿಯ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳನ್ನು ಬುಧವಾರ ಶಿವಮೊಗ್ಗದ ನಿರ್ಮಲಾ ತುಂಗಾ-ಭದ್ರಾ ಅಭಿಯಾನದ ತಂಡ ಭೇಟಿ ಮಾಡಿತು.</p>.<p>ಇತ್ತೀಚಿನ ದಿನಗಳಲ್ಲಿ ತುಂಗಾ-ಭದ್ರಾ ನದಿಗಳು ಅತ್ಯಂತ ಕಲುಷಿತವಾಗುತ್ತಿವೆ. ಕುಡಿಯಲು ಯೋಗ್ಯವಲ್ಲದ ದುಸ್ಥಿತಿಗೆ ತಲುಪಿವೆ. ಆದ್ದರಿಂದ ನದಿಯನ್ನು ಪಾವಿತ್ರ್ಯತೆ ಕಾಪಾಡುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಪರಿಸರ ತಂಡಗಳು ಹಾಗೂ ನಿರ್ಮಲ ತುಂಗಾ-ಭದ್ರಾ ಅಭಿಯಾನವು ಹಮ್ಮಿಕೊಂಡ ಜಾಗೃತಿ ಕುರಿತು ಶ್ರೀಗಳಿಗೆ ವಿಷಯ ತಿಳಿಸಲಾಯಿತು. </p>.<p>ಈ ವೇಳೆ ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹಾಗೂ ನಿರ್ಮಲ ತುಂಗ ಭದ್ರಾ ಅಭಿಯಾನ ತಂಡದ ಪ್ರಮುಖರಾದ ಪ್ರೊ.ಬಿ.ಎಂ.ಕುಮಾರಸ್ವಾಮಿ, ಪ್ರೊ. ಎಲ್. ಕೆ. ಶ್ರೀಪತಿ, ಬಾಲಕೃಷ್ಣ ನಾಯ್ಡು, ಮಾಜಿ ನಗರಸಭಾ ಸದಸ್ಯರಾದ ಶಂಕರ್, ಹಾಲೇಶಪ್ಪ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>