ಬಟ್ಟೆಗಳ ಮೇಲೆ ಚಿತ್ತಾರ ಮೂಡಿಸುವ ಕೆಲಸ ಮಾಡುತ್ತಿದ್ದ ಈ ಕಾರ್ಮಿಕರು ನಗರದ ಹಲವೆಡೆ ನೆಲೆಸಿದ್ದರು. ಕೊರೊನಾ ನಿರ್ಬಂಧಗಳ ನಂತರ ಕೆಲಸವಿಲ್ಲದೇ ಪರಿತಪ್ಪಿಸಿದ್ದರು. ಸಂಘ, ಸಂಸ್ಥೆಗಳು, ನಗರ ಪಾಲಿಕೆ ನೀಡಿದ ಆಹಾರ ಪದಾರ್ಥಗಳ ನೆರವಿನಲ್ಲೇ ಎರಡು ತಿಂಗಳು ಜೀವನ ನಡೆಸಿದ್ದರು. ಮೇ 3ರಂದು ಆನ್ಲೈನ್ ಮೂಲಕ ಅಂತರರಾಜ್ಯ ಪಾಸ್ಗೆ ಅರ್ಜಿ ಸಲ್ಲಿಸಿದ್ದಾರೆ. ಶಿವಮೊಗ್ಗ ಜಿಲ್ಲಾಡಳಿತ ಹೊರಡಲು ಅನುಮತಿ ನೀಡಿದೆ. ಆದರೆ, ತವರು ರಾಜ್ಯದ ಅನುಮತಿ ಸಿಗದೇ ಹೊರಡಲು ಸಾಧ್ಯವಾಗಿರಲಿಲ್ಲ. ಈಗ ಜಿಲ್ಲಾಡಳಿತವೇ ವಿಶೇಷ ಆಸಕ್ತಿ ವಹಿಸಿ ಅವರಿಗೆ ಅನುಮತಿ ದೊರಕಿಸುತ್ತಿದೆ.