<p><strong>ರಿಪ್ಪನ್ಪೇಟೆ</strong>: ಇಬ್ಬರು ಮಕ್ಕಳ ತಾಯಿಯೊಬ್ಬಳು ಪ್ರಿಯಕರನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದಿದೆ.</p>.<p>ತಮ್ಮಡಿಕೊಪ್ಪ ಗ್ರಾಮದ ಸುಜಾತಾ (33), ಆಯನೂರು ಕೋಟೆ ಗ್ರಾಮದ ಸಚಿನ್ (27) ಆತ್ಮಹತ್ಯೆ ಮಾಡಿಕೊಂಡವರು.</p>.<p>14 ವರ್ಷಗಳ ಹಿಂದೆ ಸುಜಾತಾ ಅವರ ವಿವಾಹವಾಗಿತ್ತು. ಬೆಳಗಾವಿಯಲ್ಲಿ ನೆಲೆಸಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 3–4 ವರ್ಷಗಳ ಹಿಂದೆ ಆಕೆಯ ಪತಿ ನಾಪತ್ತೆಯಾಗಿದ್ದರು. ಬಳಿಕ ಸುಜಾತಾ ತವರು ಮನೆಗೆ ಹಿಂದಿರುಗಿ ಕೂಲಿ ಕೆಲಸ ಮಾಡಿ ಮಕ್ಕಳಿಬ್ಬರನ್ನು ಸಲಹುತಿದ್ದರು. ಈ ನಡುವೆ ಸಚಿನ್ ಎಂಬಾತನೊಂದಿಗೆ ಸುಜಾತಾ ಸ್ನೇಹ ಬೆಳೆಸಿಕೊಂಡಿದ್ದರು. </p>.<p>ಸುಜಾತಾ ಕಷ್ಟಕ್ಕೆ ಸ್ಪಂದಿಸಿ, ಬಾಳು ನೀಡುವ ಉದ್ದೇಶದಿಂದ ವಾರದ ಹಿಂದೆ ಸುಜಾತಾ ಜೊತೆ ಸಚಿನ್ ಬಂದು ವಾಸವಾಗಿದ್ದರು ಎನ್ನಲಾಗಿದೆ.</p>.<p>ಆದರೆ, ಗುರುವಾರ ಮನೆಯಲ್ಲಿ ಇಬ್ಬರೂ ವಿಷ ಸೇವಿಸಿದ್ದಾರೆ. ಇಬ್ಬರನ್ನೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ರಾತ್ರಿ ಮೃತಪಟ್ಟಿದ್ದಾರೆ. ಈ ಕುರಿತು ರಿಪ್ಪನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಿಪ್ಪನ್ಪೇಟೆ</strong>: ಇಬ್ಬರು ಮಕ್ಕಳ ತಾಯಿಯೊಬ್ಬಳು ಪ್ರಿಯಕರನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದಲ್ಲಿ ಗುರುವಾರ ನಡೆದಿದೆ.</p>.<p>ತಮ್ಮಡಿಕೊಪ್ಪ ಗ್ರಾಮದ ಸುಜಾತಾ (33), ಆಯನೂರು ಕೋಟೆ ಗ್ರಾಮದ ಸಚಿನ್ (27) ಆತ್ಮಹತ್ಯೆ ಮಾಡಿಕೊಂಡವರು.</p>.<p>14 ವರ್ಷಗಳ ಹಿಂದೆ ಸುಜಾತಾ ಅವರ ವಿವಾಹವಾಗಿತ್ತು. ಬೆಳಗಾವಿಯಲ್ಲಿ ನೆಲೆಸಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 3–4 ವರ್ಷಗಳ ಹಿಂದೆ ಆಕೆಯ ಪತಿ ನಾಪತ್ತೆಯಾಗಿದ್ದರು. ಬಳಿಕ ಸುಜಾತಾ ತವರು ಮನೆಗೆ ಹಿಂದಿರುಗಿ ಕೂಲಿ ಕೆಲಸ ಮಾಡಿ ಮಕ್ಕಳಿಬ್ಬರನ್ನು ಸಲಹುತಿದ್ದರು. ಈ ನಡುವೆ ಸಚಿನ್ ಎಂಬಾತನೊಂದಿಗೆ ಸುಜಾತಾ ಸ್ನೇಹ ಬೆಳೆಸಿಕೊಂಡಿದ್ದರು. </p>.<p>ಸುಜಾತಾ ಕಷ್ಟಕ್ಕೆ ಸ್ಪಂದಿಸಿ, ಬಾಳು ನೀಡುವ ಉದ್ದೇಶದಿಂದ ವಾರದ ಹಿಂದೆ ಸುಜಾತಾ ಜೊತೆ ಸಚಿನ್ ಬಂದು ವಾಸವಾಗಿದ್ದರು ಎನ್ನಲಾಗಿದೆ.</p>.<p>ಆದರೆ, ಗುರುವಾರ ಮನೆಯಲ್ಲಿ ಇಬ್ಬರೂ ವಿಷ ಸೇವಿಸಿದ್ದಾರೆ. ಇಬ್ಬರನ್ನೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ರಾತ್ರಿ ಮೃತಪಟ್ಟಿದ್ದಾರೆ. ಈ ಕುರಿತು ರಿಪ್ಪನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>