<p><strong>ಹೊಸನಗರ:</strong> ನಕ್ಸಲ್ ಪೀಡಿತ ಸುಳಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಮಾಯಕರ ಮೇಲೆ ಶಾಂತಿ ಭಂಗದ ಕೇಸು ದಾಖಲು ಮಾಡಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.</p>.<p>ಸುಳಗೊಡು ಗ್ರಾ.ಪಂ. ವ್ಯಾಪ್ತಿಯ ನಕ್ಸಲ್ ಪೀಡಿತ ಉಳ್ತಿಗ ಮತ್ತು ಕರಿಗಲ್ ಗ್ರಾಮದ ನಾಲ್ವರು ಪರಿಶಿಷ್ಟ ವರ್ಗದವರು ಸೇರಿದಂತೆ 9 ಅಮಾಯಕರ ಮೇಲೆ ಐಪಿಸಿ 107ರ ಅನ್ವಯ ಶಾಂತಿ ಭಂಗದ ಕೇಸನ್ನು ಪೊಲೀಸರು ದಾಖಲು ಮಾಡಿರುವುದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p>.<p>ಉಳ್ತಿಗಾ-ಕರಿಗಲ್ ಗ್ರಾಮದ ಮಂಜಪ್ಪ, ರವಿ, ಉಮೇಶ, ಕುಮಾರ, ವೆಂಕಟೇಶ, ವಾಸಪ್ಪ ಗೌಡ, ನಾಗೇಶ, ಶ್ರೀಧರ, ಜಯಶೀಲಪ್ಪ ಗೌಡ ಎಂಬುವವರ ಮೇಲೆ ಪ್ರಕರಣ ದಾಖಲೆ ಮಾಡಲಾಗಿದೆ ಎನ್ನಲಾಗಿದೆ.</p>.<p>ಇದರಲ್ಲಿ ಶ್ರೀಧರ ಎಂಬುವವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಮಂಜಪ್ಪ ಎಂಬುವವರಿಗೆ ಕ್ಯಾನ್ಸರ್ ಆಪರೇಷನ್ ಆಗಿದ್ದು, ಕೂಲಿ ನಾಲಿ ಮಾಡುವ ಪರಿಶಿಷ್ಟ ವರ್ಗದವರ ಮೇಲೆ ಪೊಲೀಸರು ವಿನಾಕಾರಣ ಶಾಂತಿ ಭಂಗದ ಕೇಸು ದಾಖಲೆ ಮಾಡಿದ್ದಾರೆ.</p>.<p>ಬಸ್ ಸಂಚಾರವಿಲ್ಲದ ಉಳ್ತಿಗಾದಿಂದ ಸುಮಾರು 12 ಕಿ.ಮೀ ಕಾಲು ನಡಿಗೆಯಲ್ಲಿ ಯಡೂರು ತಲುಪಬೇಕು. ಅಲ್ಲಿಂದ 2 ಬಸ್ಗಳನ್ನು ಹಿಡಿದು ಹೊಸನಗರ ಪ್ರತಿ ಸಾರಿ ಬಂದು ಹೋಗಲು ಕಷ್ಟವಾಗುತ್ತಿದೆ ಎಂಬುದು ಅವರ ಅಹವಾಲು.</p>.<p>ನಕ್ಸಲ್ ಪೀಡಿತ ಗ್ರಾಮಕ್ಕೆ ಹೆಚ್ಚುವರಿ ಅನುದಾನ ನೀಡುವ ಮೂಲಕ ಅಭಿವೃದ್ಧಿಪಡಿಸಿ, ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನ ನೀಡಬೇಕು. ಗ್ರಾಮದ ಅಮಾಯಕರ ಮೇಲೆ ಅನಾವಶ್ಯಕ ಪೊಲೀಸರು ಕೇಸು ದಾಖಲೆ ಮಾಡಿ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸನಗರ:</strong> ನಕ್ಸಲ್ ಪೀಡಿತ ಸುಳಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಮಾಯಕರ ಮೇಲೆ ಶಾಂತಿ ಭಂಗದ ಕೇಸು ದಾಖಲು ಮಾಡಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.</p>.<p>ಸುಳಗೊಡು ಗ್ರಾ.ಪಂ. ವ್ಯಾಪ್ತಿಯ ನಕ್ಸಲ್ ಪೀಡಿತ ಉಳ್ತಿಗ ಮತ್ತು ಕರಿಗಲ್ ಗ್ರಾಮದ ನಾಲ್ವರು ಪರಿಶಿಷ್ಟ ವರ್ಗದವರು ಸೇರಿದಂತೆ 9 ಅಮಾಯಕರ ಮೇಲೆ ಐಪಿಸಿ 107ರ ಅನ್ವಯ ಶಾಂತಿ ಭಂಗದ ಕೇಸನ್ನು ಪೊಲೀಸರು ದಾಖಲು ಮಾಡಿರುವುದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p>.<p>ಉಳ್ತಿಗಾ-ಕರಿಗಲ್ ಗ್ರಾಮದ ಮಂಜಪ್ಪ, ರವಿ, ಉಮೇಶ, ಕುಮಾರ, ವೆಂಕಟೇಶ, ವಾಸಪ್ಪ ಗೌಡ, ನಾಗೇಶ, ಶ್ರೀಧರ, ಜಯಶೀಲಪ್ಪ ಗೌಡ ಎಂಬುವವರ ಮೇಲೆ ಪ್ರಕರಣ ದಾಖಲೆ ಮಾಡಲಾಗಿದೆ ಎನ್ನಲಾಗಿದೆ.</p>.<p>ಇದರಲ್ಲಿ ಶ್ರೀಧರ ಎಂಬುವವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಮಂಜಪ್ಪ ಎಂಬುವವರಿಗೆ ಕ್ಯಾನ್ಸರ್ ಆಪರೇಷನ್ ಆಗಿದ್ದು, ಕೂಲಿ ನಾಲಿ ಮಾಡುವ ಪರಿಶಿಷ್ಟ ವರ್ಗದವರ ಮೇಲೆ ಪೊಲೀಸರು ವಿನಾಕಾರಣ ಶಾಂತಿ ಭಂಗದ ಕೇಸು ದಾಖಲೆ ಮಾಡಿದ್ದಾರೆ.</p>.<p>ಬಸ್ ಸಂಚಾರವಿಲ್ಲದ ಉಳ್ತಿಗಾದಿಂದ ಸುಮಾರು 12 ಕಿ.ಮೀ ಕಾಲು ನಡಿಗೆಯಲ್ಲಿ ಯಡೂರು ತಲುಪಬೇಕು. ಅಲ್ಲಿಂದ 2 ಬಸ್ಗಳನ್ನು ಹಿಡಿದು ಹೊಸನಗರ ಪ್ರತಿ ಸಾರಿ ಬಂದು ಹೋಗಲು ಕಷ್ಟವಾಗುತ್ತಿದೆ ಎಂಬುದು ಅವರ ಅಹವಾಲು.</p>.<p>ನಕ್ಸಲ್ ಪೀಡಿತ ಗ್ರಾಮಕ್ಕೆ ಹೆಚ್ಚುವರಿ ಅನುದಾನ ನೀಡುವ ಮೂಲಕ ಅಭಿವೃದ್ಧಿಪಡಿಸಿ, ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನ ನೀಡಬೇಕು. ಗ್ರಾಮದ ಅಮಾಯಕರ ಮೇಲೆ ಅನಾವಶ್ಯಕ ಪೊಲೀಸರು ಕೇಸು ದಾಖಲೆ ಮಾಡಿ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>